RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ: ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ: ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ 

ಜವಾಬ್ದಾರಿಯಿಂದ ವಿಮುಖವಾಗುತ್ತಿರುವ ಕಾಂಗ್ರೆಸ್ ಸರಕಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ ಮೇ 19:  ರೈತರ ಕೃಷಿ ಸಾಲ ಮನ್ನಾ ಮಾಡುವ ಪ್ರಸ್ತಾಪ ಬಂದಾಗೊಮ್ಮೆ ಕೇಂದ್ರ ಸರಕಾರದ ಕಡೆಗೆ ಬೊಟ್ಟುಮಾಡಿ ತೋರಿಸುತ್ತ ರಾಜ್ಯ ಸರಕಾರ ತನ್ನ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಜಾಣ ನಡೆಯನ್ನು ತೋರಿಸುತ್ತಿದ್ದು, ರೈತ ಸಮುದಾಯವನ್ನು ಬರಗಾಲದ ಸಂಕಷ್ಟ ಹಾಗೂ ಸಾಲದ ಹೊರೆಯಿಂದ ಪಾರುಮಾಡುವ ಜವಾಬ್ದಾರಿಯಿಂದ ವಿಮುಖವಾಗುತ್ತಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿಂದೆಂದೂ ಕಾಣದ ಬರಗಾಲದ ಭೀಕರತೆ ಈ ಸಲ ಬಂದೊದಗಿದೆ. ಆರಂಭದಲ್ಲಿ ಮಳೆಗಾಲ ಸ್ವಲ್ಪ ಪ್ರಮಾಣದ ಭರವಸೆ ಮೂಡಿಸಿದ್ದರೂ ಸಹ ಇನ್ನೂ ಮುಂದಿನ ದಿನಗಳನ್ನು ಈಗಲೇ ಉಹಿಸಲು ಸಾಧ್ಯವಿಲ್ಲ. ಈ ಸಲ ಮಳೆಗಾಲ ಚನ್ನಾಗಿ ಆದರೂ ಸಹ ಸತತ ನಾಲ್ಕೈದು ವರ್ಷಗಳ ಬಗರಾಲದ ಭವಣೆ ಇಷ್ಟರಿಂದಲೇ ಪರಿಹಾರವಾಗದು. ರೈತ ಸಮುದಾಯ ಬಹುದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಹೊರೆಯ ವರ್ತುಲದಲ್ಲಿ ಸಿಲುಕಿ ನಲಗುತ್ತಿದೆ ಎಂದು ಹೇಳಿದ ಅವರು ರೈತರನ್ನು ಈ ಸಂಕಷ್ಟದಿಂದ ಪಾರುಮಾಡುವ ನೇರ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ದಿನಗಳಲ್ಲಿ ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದಾಗ ಎಲ್ಲ ರಾಜಕೀಯ ಪಕ್ಷಗಳು ಹಾಗೂ ರೈತ ಸಂಘಟನೆಗಳು ರೈತ ಸಮುದಾಯವನ್ನು ಸಾಲದ ಹೊರೆಯಿಂದ ಮುಕ್ತ ಮಾಡುವಂತೆ ಒತ್ತಾಯಿಸಿ ಹೋರಾಟಗಳ ಮುಖಾಂತರ ರಾಜ್ಯ ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದವು, ಆದರೆ ಈ ಸಲದ ಬರಗಾಲದ ಸಂಕಷ್ಟ ದೊಡ್ಡ ಪ್ರಮಾಣದಲ್ಲಿ ಇದ್ದರೂ ಸಹ ಅಂತಹ ಸಂಘಟಿತ ಹೋರಾಟವನ್ನು ಈ ಸಲ ಕಾಣದಿರುವದು ಖೇದಕರ ಸಂಗತಿಯಾಗಿದ್ದು, ಈ ಸಂದರ್ಭದಲ್ಲಿ ರೈತ ಪರ ನಿಲುವು ಹೊಂದಿರುವ ನಾವೆಲ್ಲರೂ ನಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪೂಜಾರಿ ಒತ್ತಿ ಹೇಳಿದ್ದಾರೆ

Related posts: