RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ

ಗೋಕಾಕ:ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ 

ಸಂಗೀತ ಕಲಾವಿದ ಬಸವರಾಜ ಘೀವಾರಿಗೆ ಕಲಾ ರತ್ನ ಪ್ರಶಸ್ತಿ

ಗೋಕಾಕ ಜ 22: ತಾಲೂಕಿನ ಅರಭಾವಿಮಠದ ಜಾನಪದ ಸಂಗೀತ ಕಲಾವಿದ ಬಸವರಾಜ ಘೀವಾರಿ ಅವರಿಗೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠದ ಪೂಜ್ಯ ಶ್ರೀ ನೀಲಕಂಠ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಕಲಾ ರತ್ನ ಪ್ರಶಸ್ತಿಯನ್ನು ಆನಂದಪುರ ಜಗದ್ಗುರು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ| ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ ಇದ್ದರು.
ಕಲಾವಿದ ಬಸವರಾಜ ಘೀವಾರಿ ಅವರು ನಾಡಿನ ವಿವಿಧಡೆ ಸಮಾರಂಭಗಳಲ್ಲಿ ಭಾಗವಹಿಸಿ ತಮ್ಮ ಜಾನಪದ ಸಂಗೀತ ಸೇವೆ ನೀಡಿದ್ದಾರೆ. ಅಲ್ಲದೇ ಇವರಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Related posts: