ಗೋಕಾಕ: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ

ಸಚಿವರಿಗೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರುವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸುವಂತೆ ಆಗ್ರಹಿಸಿ ಪಶುವೈದ್ಯರ ಮನವಿ
ಗೋಕಾಕ ಮೇ 19: ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಗೋಳಿಸಬೆಕೆಂದು ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಸದಸ್ಯರು ಪಶುವೈದ್ಯ ಡಾ.ಮೋಹನ ಕಮತ ನೇತೃತ್ವದಲ್ಲಿ ಸಣ್ಣ ಕೈಗಾರಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
ಕಳೆದ ಎರೆಡು ದಶಕಕ್ಕಿಂತ ಹೆಚ್ಚಿನಕಾಲ ಪಶು ವೈದ್ಯಾಧಿಕಾರಿಯಾಗಿ ಸೇವೆ ಮಾಡುತ್ತಿರುವ ಎಲ್ಲ ಹಿರಿಯ ಪಶುವೈದ್ಯಾಧಿಕಾರಿಯಾಗಿ ಪದೋನ್ನತಿ ದೊರಕಿಲ್ಲ ಈ ಅಧಿಸೂಚನೆ ಪ್ರಕಟವಾದರೆ ಸೇವೆಯಲ್ಲಿ ಆರು ವರ್ಷಗಳು ಪೂರೈಸಿದವರಿಗೆ ಹಿರಿಯ ಪಶುವೈದ್ಯಾಧಿಕಾರಿಯಾಗಿ ಪದೋನ್ನತಿ ದೊರಕುತ್ತದೆ ಈ ಕೂಡಲೆ ಸರಕಾರದ ಗಮನ ಹರಿಸಿ ವೃಂದ ನೇಮಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಎ.ಕೆ.ಚಂದ್ರಶೇಖರ್, ಡಾ.ಜ್ಞಾನೇಶ್ವರ ಕಾಂಬಳೆ,ಡಾ.ಅನಿಲಕುಮಾರ ಗಂಗರೆಡ್ಡಿ, ಡಾ.ಜಯಪ್ರಕಾಶ್ ಮಣ್ಣೇರಿ, ಡಾ.ವಿಶಾಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈಗಾಗಲೆ ದಿ.16 ರಿಂದ ರಾಜ್ಯಾದ್ಯಂತ ಎಲ್ಲಾ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಸಂಪೂರ್ಣ ಬಂದ ಮಾಡಿ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಕಾಲ ಮುಷ್ಕರ ಕೈಗೋಳಲಾಗಿದೆ ಇದರಿಂದ ತಾಲೂಕಿನಲ್ಲಿ ಪಶುಗಳು ಚಿಕಿತ್ಸೆಗಾಗಿ ಪರಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.