ಗೋಕಾಕ:ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ
ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ
ಗೋಕಾಕ ಜ 9: ಮಂಗಳೂರು ಜಿಲ್ಲೆಯ ಸುರತ್ಕಲ್ ನ ಕಾಟೀಪಳ್ಳದಲ್ಲಿ ನಡೆದ ದೀಪಕರಾವ್ ಅವರ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು
ಮಂಗಳವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ , ದೀಪಕರಾವ್ ಹಂತಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ , ಪಿಎಪ್ಐ ಮತ್ತು ಕೆಎಫಡಿ ಸಂಘಟನೆಗಳ ಮೇಲೆ ಪ್ರತಿಬಂಧ ಹೇರಬೇಕೆಂದು ಆಗ್ರಹಿಸಿ ಸೂಮಾರು ಒಂದು ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಯಿಸಿ ತಹಶೀಲ್ದಾರ್ ಮುಂಖಾತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು
ಕಳೆದ 2 ವರ್ಷಗಳಲ್ಲಿ ಸೂಮಾರು 21 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಪೊಲೀಸ ಇಲಿಖೆಯು ಸಹ ಈ ರೀತಿ ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿರುವ ಕೊಲೆಗಡುಕರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲಾ ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದು ಸಾಭಿತಾಗುತ್ತಿದೆ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ದೀಪಕರಾವ್ ಕೋಲೆಗೈದ ಕೋಲೆಗಡುಕರನ್ನು ತಕ್ಷಣ ಬಂಧಿಸಿ ಅವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಿ ಪಿಎಫ್ಐ ಮತ್ತು ಕೆಎಫಡಿ ಸಂಘಟನೆಗಳನ್ನು ನಿಷೇಧಿಸಿಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಸದಾಶಿವ ಗುದಗಗೋಳ, ಲಕ್ಷ್ಮಣ ಮೀಶಾಳೆ, ಗುರು ಬೆನವಾಡ, ಆನಂದ ಕುಡಚೆ , ಸಂತೋಷ ಗೊಂಧಳಿ , ಕಿರಣ ಮಿರಜಕರ , ಶಿವಲಿಂಗ ಮಾಯಗೊಂಡ , ಮಾರುತಿ ವಾಕುಡೆ, ಆಧಿನಾಥ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು