ಗೋಕಾಕ:ಮನೆ ಕಳ್ಳತನ: ಆರೋಪಿ ಬಂಧನ, ಚಿನ್ನ ,ಬೆಳ್ಳಿ ನಗದು ವಶ

ಮನೆ ಕಳ್ಳತನ: ಆರೋಪಿ ಬಂಧನ, ಚಿನ್ನ ,ಬೆಳ್ಳಿ ನಗದು ವಶ
ಗೋಕಾಕ ಫೆ 10 : ನಗರದ ಪಿಡಬ್ಲೂಡಿ ಕ್ವಾರ್ಟರ್ಸದಲ್ಲಿ ಕಳೆದ ಎರೆಡರಿಂದ ಮೂರು ತಿಂಗಳ ಹಿಂದೆ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.
ಪಿಡಬ್ಲೂಡಿ ಕ್ವಾರ್ಟರ್ಸ ನಿವಾಸಿಯೊಬ್ಬರ ಮನೆಯಲ್ಲಿ ಕಳೆದ ಎರಡರಿಂದ ಮೂರು ತಿಂಗಳ ಹಿಂದೆ ಕಳ್ಳತನವಾಗಿತ್ತು. ಮನೆಯ ಹಬಾಗಿಲನ್ನು ಒಡೆದು ಚಿನ್ನಾಭರಣ ಮತ್ತು ನಗದು ದೊಚ್ಚಿದ ಪ್ರಕರಣ ದಾಖಲಾಗಿತ್ತು.
ನಗರದ ಯೋಗಿಕೋಳ್ಳ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಆರೋಪಿ ನಗರದ ಪಿಡಬ್ಲೂಡಿ ಕ್ವಾರ್ಟರ್ಸ ನಲ್ಲಿ ಮನೆ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಯಿಂದ 14.5 ಗ್ರಾಂ ಬಂಗಾರದ ಆಭರಣಗಳು, ಅದರ ಕಿಮ್ಮತ್ತು 75,000/ ಮತ್ತು 250 ಗ್ರಾಮ ಬೆಳ್ಳಿ ಆಭರಣಗಳು ಅದರ ಕಿಮ್ಮತ್ತು 12500/ ಹಾಗೂ ಒಂದು ಸ್ಯಾಮಸಂಗ ಮತ್ತು ಒಂದು ಎಮ್.ಐ ಕಂಪನಿ ಮೊಬೈಲಗಳು ಅದರ ಕಿಮ್ಮತ್ತು 15000/ ಹೀಗೆ ಒಟ್ಟು ರೂ 102500 ಮೌಲ್ಯದ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಹಾಗೂ ಎರೆಡು ಮೊಬೈಲಗಳನ್ನು ವಶಪಡಿಸಿಕೊಂಡಿದ್ದು, ಸದರಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಭೇದಿಸುವುದಕ್ಕಾಗಿ ಇನ್ಸ್ಪೆಕ್ಟರ್ ಪ್ರಕಾಶ ಯಾತನೂರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಕಾರ್ಯಾಚರಣೆಯಲ್ಲಿ ಪಿಎಸ್ಐ ಎಂ.ಡಿ.ಘೋರಿ ಸಿಬ್ಬಂದಿಗಳಾದ ಬಿ.ವ್ಹಿ ನೇರಲೆ,ಸುರೇಶ್ ಈರಗಾರ,ಮಲ್ಲಪ್ಪ ಗಿಡಗಿರಿ,ರಮೇಶ ಮುರನಾಳೆ,ವಿಠಲ ನಾಯಿಕ, ಸಿ.ಎಸ್.ಬಿರಾದಾರ, ಎನ್.ಬಿ.ಬೆಳಗಲಿ, ಎಸ್.ಬಿ.ಪೂಜೇರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.