RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಜಿಲ್ಲಾ ವಿಭಜನೆ ವಿರೋಧಿಸಿದ ಮನು ಬಳಿಗಾರಗೆ ಖಾನಪ್ಪನವರ ಪತ್ರ

ಗೋಕಾಕ:ಜಿಲ್ಲಾ ವಿಭಜನೆ ವಿರೋಧಿಸಿದ ಮನು ಬಳಿಗಾರಗೆ ಖಾನಪ್ಪನವರ ಪತ್ರ 

ಜಿಲ್ಲಾ ವಿಭಜನೆ ವಿರೋಧಿಸಿದ ಮನು ಬಳಿಗಾರಗೆ ಖಾನಪ್ಪನವರ  ಪತ್ರ

ಗೋಕಾಕ ಜ 1: ಅಭಿವೃದ್ಧಿಯ ಹಿತದೃಷ್ಠಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವ ಪ್ರಸ್ತಾಪಗಳು ಸರಕಾರಕ್ಕೆ ಕೇಳಿ ಬರುತ್ತಿರುವಾಗ ಅವುಗಳನ್ನು ವಿರೋಧಿಸುತ್ತಿರುವ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ, ಜಿಲ್ಲೆಯ ಸಾಹಿತಿಗಳು ಮತ್ತು ಹೋರಾಟಗಾರರ ಕ್ರಮ ಸರಿಯಲ್ಲ, ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಕ.ಸಾ.ಪ. ರಾಜಾಧ್ಯಕ್ಷ ಮನು ಬಳಿಗಾರ ಅವರಿಗೆ ಪತ್ರ ಬರೆದು, ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಗಾವಿ ಜಿಲ್ಲೆಯ ವಿಭಜನೆ ಕೂಗು ಇಂದು-ನಿನ್ನೆದಲ್ಲ. ಕಳೆದ 4 ದಶಕಗಳಿಂದಲೂ ಬೆಳಗಾವಿಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ತಾಲೂಕುಗಳನ್ನು ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಪ್ರಸ್ತಾಪ ಮತ್ತು ಹೋರಾಟಗಳು ನಡೆದಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಸರಕಾರಗಳೇ ನೇಮಿಸಿದ ಹುಂಡೇಕರ್, ಪಿ.ಸಿ. ಗದ್ದಿಗೌಡರ ಮತ್ತು ವಾಸುದೇವ ಆಯೋಗಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿಸಲು ವರದಿಗಳನ್ನು ನೀಡಿವೆ. 1999 ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ಜೆ.ಎಚ್. ಪಟೇಲ. ಅವರು ಗೋಕಾಕ ಜಿಲ್ಲೆಯಾಗಿಸಲು ಗೆಜೆಟನ್ನು ಹೊರಡಿಸಿದ ವಿಷಯವು ಸಹ ಎಲ್ಲರ ಗಮನಕ್ಕೆ ಇರುವ ವಿಚಾರ. ಹೀಗಿರುವಾಗ ಗಡಿ ಸಮಸ್ಯೆ ಒಂದನ್ನು ಮುಖ್ಯವಾಗಿಟ್ಟುಕೊಂಡು ಜಿಲ್ಲೆ ವಿಭಜನೆಗೆ ವಿರೋಧಿಸುವುದು ಸರಿಯಲ್ಲ. ಇದರಿಂದ ಮರಾಠಿಗರ ಪ್ರಭಾವ ಹೆಚ್ಚಾಗುತ್ತದೆ ಎಂಬ ಗುಮಾನು ಸಹ ಸತ್ಯಕ್ಕೆ ದೂರವಾದದ್ದು. ಗಡಿ ವಿಷಯ ಬಂದಾಗ ಬೆಳಗಾವಿಯವರೇ ಮಾತ್ರ ಹೋರಾಟಗಳನ್ನು ಮಾಡದೇ ಇಡಿ ಬೆಳಗಾವಿ ಜಿಲ್ಲೆ ಒಗ್ಗಟ್ಟಾಗಿ ಹೋರಾಟ ಮಾಡಿ ನಾಡವಿರೋಧಿ ಶಕ್ತಿಗಳನ್ನು ಸದೇ ಬಡಿಯುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ‘ಯಳ್ಳೂರ ಪ್ರಕರಣವಾಗಲಿ, ಪಾಲಿಕೆ ಮೇಲೆ ಭಗವಾಧ್ವಜ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕ ಹೋರಾಟಗಳನ್ನು ಮಾಡಿ ನಾಡವಿರೋಧಿಗಳಿಗೆ ತಕ್ಕ ಉತ್ತರ ನೀಡಿದ ಹೆಮ್ಮೆ ಗೋಕಾಕದ ತಾಲೂಕಿನದ್ದು. ಹಾಗಾಗಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆಯಾದರೆ ಕನ್ನಡಿಗರಿಗೆ ಯಾವುದೇ ಹಿನ್ನೆಡೆಯಾಗುವುದಿಲ್ಲ.

ಕನ್ನಡ ನೆಲ, ಜಲ, ಭಾಷೆಯ ವಿಷಯ ಬಂದಾಗ ಯಾರೇ ಕನ್ನಡಿಗರಾಗಲೀ ಕನ್ನಡಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಟಕ್ಕೆ ಇಳಿಯಲು ಸಿದ್ದರಿರುವಾಗ ಎಂ.ಇ.ಎಸ್. ಶಕ್ತಿ ಹೆಚ್ಚಾಗುವ ಪ್ರಶ್ನೆಯೇ ಇಲ್ಲ. ಯಾರೋ ಹರಿಬಿಟ್ಟ ಮಾತನ್ನು ಕೇಳಿ ಜಿಲ್ಲಾ ವಿಭಜನೆಗೆ ವಿರೋಧ ವ್ಯಕ್ತಪಡಿಸುವ ಮಾತನ್ನು ಜಿಲ್ಲೆಯ ಕನ್ನಡಪರ ಹೋರಾಟಗಾರರು, ಸಾಹಿತಿಗಳು ಬಿಟ್ಟು ಸುಮ್ಮನಿರುವುದು ಸೂಕ್ತ.
ಮನು ಬಳಿಗಾರ ಅವರಿಗೆ ಕ.ಸಾ.ಪ. ದಲ್ಲಿ ಮಾಡಲು ಬಹಳ ಕೆಲಸಗಳಿವೆ. ಅವುಗಳನ್ನು ಮಾಡುವುದನ್ನು ಬಿಟ್ಟು ಜಿಲ್ಲಾ ವಿಭಜನೆ ಬಗ್ಗೆ ತಲೆ ಕೆಡಸಿಕೊಳ್ಳುವುದು ಸರಿಯಲ್ಲ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಮುಖ ಹುದ್ದೆಯಲ್ಲಿದ್ದಾಗ ಕರ್ನಾಟಕ ಗಡಿ ವಿಷಯದ ಬಗ್ಗೆ ಮಾತನಾಡದ ಮನು ಬಳಿಗಾರ ಈಗ ಕ.ಸಾ.ಪ. ಅಧ್ಯಕ್ಷರಾಗಿ ಗಡಿ ವಿಷಯ ಪ್ರಸ್ತಾಪಿಸಿ ಜಿಲ್ಲಾ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂಬುದು ನಮ್ಮ ಪ್ರಶ್ನೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ವಿಷಯಕ್ಕೆ ಸಹಕರಿಸಬೇಕಾಗಿದೆ. ಇಲ್ಲದಿದ್ದರೆ ಅನಿವಾರ್ಯವಾಗಿ ವಿರೋಧ ವ್ಯಕ್ತಪಡಿಸುವವರ ವಿರುದ್ಧ ಗೋಕಾಕ ಮತ್ತು ಚಿಕ್ಕೋಡಿ ಜನರು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ಖಾನಪ್ಪನವರ ಹೇಳಿದ್ದಾರೆ.

Related posts: