ಘಟಪ್ರಭಾ:ಸಿಎಂಜಿಆರ್ವಾಯ್ ಯೋಜನೆಯಡಿ ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ
ಸಿಎಂಜಿಆರ್ವಾಯ್ ಯೋಜನೆಯಡಿ ರಸ್ತೆ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ : ಬಸವಂತ ಕಮತಿ
ಘಟಪ್ರಭಾ ಡಿ 26: ಮಲ್ಲಾಪೂರ ಪಿಜಿ-ರಾಜಾಪೂರ-ತುಕ್ಕಾನಟ್ಟಿ-ನಾಗನೂರ ರಸ್ತೆ ಕಾಮಗಾರಿಗೆ ರಾಜಾಪೂರದಲ್ಲಿ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿತು.
ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಿಎಂಜಿಆರ್ವಾಯ್ ಯೋಜನೆಯಡಿ ಈ ಕಾಮಗಾರಿಗೆ 80.38 ಲಕ್ಷ ರೂ. ಅನುದಾನ ಮಂಜೂರಾಗಿದೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಈ ಕಾಮಗಾರಿ ನೆರವೇರಿದ್ದು, ಇದರಿಂದ ಸಾರ್ವಜನಿಕರ ರಸ್ತೆ ಸಂಚಾರ ಸುಗಮವಾಗಲಿದೆ ಎಂದು ಹೇಳಿದರು.
ಗೋಕಾಕ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಘಯೋಮನೀಬಮ ಮಂಡಳ ನಿರ್ದೇಶಕ ಬಸವರಾಜ ಪಂಡ್ರೊಳ್ಳಿ, ರಾಮಚಂದ್ರ ಪಾಟೀಲ, ಗ್ರಾಪಂ ಸದಸ್ಯರು, ಗುತ್ತಿಗೆದಾರ ವಿಶ್ವನಾಥ ನೇಮಗೌಡರ ಮುಂತಾದವರು ಉಪಸ್ಥಿತರಿದ್ದರು.