ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ
ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಈದೇ ಮೀಲಾದುನ್ನಬಿ ಆಚರಣೆ
ಘಟಪ್ರಭಾ ಡಿ 1: ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಹಬ್ಬವನ್ನು ಪ.ಪಂ ಸದಸ್ಯ ಸಲೀಮ ಎಚ್. ಕಬ್ಬೂರ ಫ್ರೇಂಡ್ಸ್ ಗ್ರುಫ್ ವತಿಯಿಂದ ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ಶ್ರೀ ದೂದನಾನ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೆಹಬೂಬ ಸಯ್ಯದ ಮಾತನಾಡಿ, ಬುದ್ಧಿ ಮಾಂದ್ಯ ಮಕ್ಕಳಿಗೂ ಪ್ರೀತಿ ವಾತ್ಸಲ್ಯದ ಅವಶ್ಯಕತೆಯಿದೆ. ಬುದ್ಧಿ ಮಾಂದ್ಯ ಮಕ್ಕಳು ವಿಶೇಷ ಗುಣಗಳನ್ನು ಹೊಂದಿದ್ದು, ಇವರೊಂದಿಗೆ ಕಾಲ ಕಳೆದ್ದಿದು ಸಂತಸ ತಂದಿದೆ. ನಮ್ಮ ಫ್ರೇಂಡ್ಸ್ ಗ್ರುಫ್ವತಿಯಿಂದ ಪ್ರತಿ ವರ್ಷ ಈದೇ ಮೀಲಾದ ಹಬ್ಬವನ್ನು ಈ ಶಾಲೆಯಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ಮಧ್ಯಾಹ್ನ ವಿಶೇಷ ಊಟದ ಜೊತೆಗೆ ಸಿಹಿ ಹಂಚುವ ಮೂಲಕ ಈದೇ ಮೀಲಾದ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷೆ ತಂಗೆವ್ವಾ ಅಂಗಡಿ ಆಗಮಿಸಿದರು. ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ರಹೀಮಖಾನ ಪಠಾಣ, ಜಹಾಂಗೀರ ಬಾಗವಾನ, ಪೈಜಲ್ ಬಾಗವಾನ, ಅಲ್ತಾಫ ಉಸ್ತಾದ, ದಿಲಾವರ ಬಾಳೇಕುಂದ್ರಿ, ಗಜಬಾರ ಬೋರಗಾಂವಿ, ರಿಯಾಜ ಬಾಡಕರ, ಪ್ರಧಾನ ಗುರುಗಳಾದ ಎಸ್.ಎ.ಸಾರಾಪೂರ, ಸಹ ಶಿಕ್ಷಕರಾದ ಬಿ.ಬಿ.ಮುದಗನ್ನವರ, ಪದ್ಮಶ್ರೀ ಆಸಂಗಿ, ಭಾರತಿ ಗಿಡಗಾರ, ಈರಪ್ಪಾ ಅಂಗಡಿ, ಸುಮಾ ಅಂಗ, ಅಶ್ವಿನಿ ಹುಲ್ಲೋಳಿ, ಜೀವಕ್ಕಾ ಡಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.