ಗೋಕಾಕ:ದಿನಾಂಕ 12 ರಂದು ನಗರದಲ್ಲಿ ಬೃಹತ್ ತಿರಂಗಾ ಶೋಭಾಯಾತ್ರೆ : ಮುರುಘರಾಜೇಂದ್ರ ಮಹಾಸ್ವಾಮಿ ಮಾಹಿತಿ
ದಿನಾಂಕ 12 ರಂದು ನಗರದಲ್ಲಿ ಬೃಹತ್ ತಿರಂಗಾ ಶೋಭಾಯಾತ್ರೆ : ಮುರುಘರಾಜೇಂದ್ರ ಮಹಾಸ್ವಾಮಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :
75ನೇ ವರ್ಷದ ಅಮೃತಮಹೋತ್ಸವದ ಅಂಗವಾಗಿ ಗೋಕಾಕ ನಗರದಲ್ಲಿ ಶುಕ್ರವಾರ ದಿನಾಂಕ 12 ರಂದು ಶೂನ್ಯ ಸಂಪಾದನ ಮಠ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ತಿರಂಗಾ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
12 ದಿನಾಂಕ ರಂದು ನಗರದಲ್ಲಿ 100 ಮೀಟರ ಉದ್ದದ ರಾಷ್ಟ್ರಧ್ವಜದ ಶೋಭಾಯಾತ್ರೆಯನ್ನು ಅಂದು ಬೆಳಿಗ್ಗೆ 9:30 ಘಂಟೆಗೆ ಚನ್ನಬಸವೇಶ್ವರ ಕಾಲೇಜಿನಲ್ಲಿ ಆವರಣದಿಂದ ಪ್ರಾರಂಭಿಸಲಾಗುವದು. ಈ ಶೋಭಾಯಾತ್ರೆಯು ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ನಗರದ ಬಸವೇಶ್ವರ ವೃತ್ತದ ತಲುಪವದು.ಅಲ್ಲಿ ರಾಷ್ಟ್ರ ಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಗೋಳಿಸಲಾಗುವದು. ಈ ಕಾರ್ಯಕ್ರಮದಲ್ಲಿ ಬಳ್ಳಾರಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಮುಖಂಡ ಗಂಗಾಧರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದು, ತಾಲೂಕಿನ ಎಲ್ಲಾ ಸಾರ್ವಜನಿಕರು, ಶಾಲಾ , ಕಾಲೇಜಿನ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಈ ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮುಖಂಡರಾದ ನಾರಾಯಣ ಮಠಾಧೀಕಾರಿ, ಸದಾಶಿವ ಗುದಗಗೋಳ, ಮುಖಂಡರಾದ ಅನುಪಾ ಕೌಶಿಕ, ಲಕ್ಷ್ಮಣ್ ಸೊಂಟ್ಟಕ್ಕಿ, ಚೇತನ ಜೋಗನ್ನವರ ಉಪಸ್ಥಿತರಿದ್ದರು .