ಮೂಡಲಗಿ:ಮೂಡಲಗಿ ಪಟ್ಟಣ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ : ಡಾ. ಸಂಜಯ ಹೊಸಮಠ
ಮೂಡಲಗಿ ಪಟ್ಟಣ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ : ಡಾ. ಸಂಜಯ ಹೊಸಮಠ
ಮೂಡಲಗಿ ನ 20: ಮೂಡಲಗಿ ಪಟ್ಟಣದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಸುತ್ತಾ ಪ್ರಗತಿಪಥದತ್ತ ಸಾಗಿ ಸಹಕಾರಿ ನಗರದ ಹೆಬ್ಬಾಗಿಲು ಇದ್ದಂತೆ. ಕಾರಣ ನಗರದ ಪ್ರವೇಶದ ಮುಖ್ಯ ದ್ವಾರಗಳಲ್ಲಿ ಸಹಕಾರಿ ನಗರಕ್ಕೆ ಹಾರ್ದಿಕ ಸ್ವಾಗತ ಎಂಬ ಮಹಾದ್ವಾರವನ್ನು ನಿರ್ಮಿಸಬೇಕೆಂದು ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಡಾ. ಸಂಜಯ ಹೊಸಮಠ ಸಲಹೆ ನೀಡಿದರು.
ಅವರು ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಲ ಬೆಂಗಳೂರು ಹಾಗೂ ಮೂಡಲಗಿ ತಾಲೂಕ ಸಹಕಾರಿ ಸಂಘಗಳ ಒಕ್ಕುಟ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಸೊಸೈಟಿಯಲ್ಲಿ ಸೋಮವಾರ ಹಮ್ಮಿಕೊಂಡ 64 ನೇ ಅಖಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಹಕಾರಿ ಸಂಘಗಳು ಬಡ್ಡಿಯೇತರ ಜನ ಸೇವೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೇರುದಾರರ ಶ್ರೇಯಸ್ಸನ್ನು ಬಯಸಬೇಕೆಂದರು. ಸಹಕಾರಿ ಸಂಘಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಕೌಶಲ್ಯ ತರಬೇತಿ ನೀಡಬೇಕು ಮತ್ತು ಪಾರದರ್ಶಕ ಆಡಳಿತಕ್ಕೆ ಗಣೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಪ.ಪೂ ಮಹಾವಿದ್ಯಾಲಯದ ಆಡಳಿತಾಧಿಕಾರಿ ಸುರೇಶ ಲಂಕೆಪ್ಪನವರ ಮಾತನಾಡಿ, ಭಾರತೀಯರ ರಕ್ತ ಕಣದಲ್ಲಿ ಮೊದಲಿನಿಂದಲೂ ಕೌಶಲ್ಯ ಅಡಗಿದೆ. ಕೌಶಲ್ಯಗಳನ್ನು ಗುರುತಿಸಿ ಸಾಧನೆ ಮಾಡಲು ಅವಕಾಶ ನೀಡಬೇಕೆಂದರು. ಬಾಂಗ್ಲಾದೇಶ ಮಹ್ಮದ ಯ್ಯೂಶೀಪ್ ಸಾಧನೆಯನ್ನು ಉದಾಹರಣೆಯಾಗಿ ತಿಳಿಸುತ್ತಾ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಬೇಕು.ಗ್ರಾಮೀಣ ಭಾಗಗಳಲ್ಲಿ ಹಣಕಾಸಿನ ಸಹಕಾರಿ ಸಂಸ್ಥೆಗಳು ಜನರಲ್ಲಿ ಹಾಸುಹೊಕ್ಕಾಗಿವೆ.ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎಟಿಎಸ್ ಕೆಟ್ಟ ಪದ್ದತಿಯನ್ನು ಸಹಕಾರಿ ಸಂಘಗಳು ಬೆಳೆಸಿಕೊಂಡು ಹೋಗಬಾರದು ಎಂದರು.
ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ಪ್ರಗತಿಯ ದಾಪುಗಾಲು ಹಾಕುತ್ತಿರುವ ಮೂಡಲಗಿಯಲ್ಲಿನ ಸಹಕಾರಿ ಸಂಘಗಳು ಬೇರೆ ಕಡೆ ತಮ್ಮ ಶಾಖೆಗಳನ್ನು ಪ್ರಾರಂಭಿಸಲು ಬಹಳ ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.
ತೆರಿಗೆ ಸಲಹೆಗಾರ ಮಲ್ಲಿನಾಥ ಶೆಟ್ಟಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಹಕಾರಿ ಸಂಘಗಳು ಪ್ರತಿಸ್ಪರ್ದಿ ಬೆಳೆದು ನಿಂತಿವೆ. ಆದರೆ ಆದಾಯ ತೆರಿಗೆ ಹೊಸ ತಿದ್ದುಪಡೆ ಕಾಯ್ದೆ ನಮಗೆ ಬ್ರೆಕ್ ಹಾಗಿದೆ. ಕಾರಣ ಎಲ್ಲ ಸಹಕಾರಿಗಳು ಇನ್ನು ಮುಂದೆ ಸದಸ್ಯರಿಂದ ಮಾತ್ರ ವ್ಯವಹಾರ ಮಾಡಬೇಕು. ಆರ್ಬಿಆಯ್ ಅಧೀನದ ಬ್ಯಾಂಕುಗಳಲ್ಲಿ ದೀರ್ಘ ಕಾಲದ ಠೇವು ಹಣವನ್ನು ಇಡಬಾರದೆಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಅವರು ದೂರವಾಣಿ ಕೈಪಿಡಿ ಬಿಡುಗಡೆ ಮಾಡಿ, ಸಹಕಾರವಿಲ್ಲದೇ ಜೀವನವೇ ನಡೆಯದು.ನಗರದಲ್ಲಿರುವ ಎಲ್ಲ ಸಹಕಾರಿ ಸಂಘಗಳು ಸಹಕಾರ ಮನೋಭಾವನೆ ಬೆಳಸಿಕೊಂಡು ಶೇರುದಾರರ ಠೇವಣಿದಾರರ ಹಿತಕಾಪಾಡಿಕೊಂಡು ಹೆಸರುವಾಸಿ ಆಗಬೇಕೆಂದರು.
ಡಾ. ಸಂಜಯ ಹೊಸಮಠ, ಬಿ.ಆರ್ ಪಾಟೀಲ,ಮಹಾದೇವಯ್ಯ ಜಿ.ಹಿರೇಮಠ, ಮಲ್ಲಪ್ಪ ಮದಗುಣಕಿ, ಸುರೇಶ ಲಂಕೆಪ್ಪನವರ ಇವರನ್ನು ಒಕ್ಕೂಟದ ವತಿಯಿಂದ ಸತ್ಕರಿಸಲಾಯಿತು.
ಚೈತನ್ಯ ಮಹಿಳಾ ವಿವಿದ್ದೋದ್ದೇಶ ಸಹಖಾರಿ ಸಂಘದ ಅಧ್ಯಕ್ಷೆ ಮೀನಾಕ್ಷಿ ಎಮ್ ಹಿರೇಮಠ ಅಧ್ಯಕ್ಷ ವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕ ತಮ್ಮಣ್ಣಾ ಬಿ ಕೆಂಚರಡ್ಡಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಜಿ ಢವಳೇಶ್ವರ, ಮೂಡಲಗಿ ಸಹಕಾರಿ ಬ್ಯಾಂಕಿನ ಚೇರಮನ ಡಾ. ಕೆ.ವ್ಹಿ.ದಂತಿ, ಬಸವೇಶ್ವರ ಅರ್ಬನ ಸೊಸಾಟಿಯ ಚೇರಮನರ ಚನ್ನಬಸು ಬಿ ಬಡ್ಡಿ, ಮಹಾಲಕ್ಷ್ಮೀ ಸೊಸಾಯಟಿಯ ಚೇರಮನ ಮುತ್ತಪ್ಪ ಈರಪ್ಪನವರ,ಚಂದ್ರು ಗಾಣಿಗೇರ, ಶ್ರೀಕಾಂತ ಹಿರೇಮಠ, ಶ್ರೀಶೈಲ ಮದಗನ್ನವರ,ಮಲ್ಲು ಢವಳೇಶ್ವರ, ಸಂಗಪ್ಪ ನಿಡಗುಂದಿ, ಹಣಮಂತ ಗಾಣಿಗೇರ, ಸುರೇಶ ಮರೆನ್ನವರ, ಪರಸುರಾಮ ಕುಟರಟ್ಟಿ, ಮಹಾದೇವ ಮಲಗೌಡರ, ಚನ್ನಪ್ಪ ಕುಡಚಿ, ಅರ್ಜುನ ಗಾಣಿಗೆರ ಮತ್ತಿತರು ಇದ್ದರು.
ಗೂಳಪ್ಪ ಬಿಜಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎಸ್ ಬಡಿಗೇರ ಸ್ವಾಗತಿಸಿದರು. ಸಿ.ಎಸ್ ಬಗನಾಳ ಮತ್ತು ರಮೇಶ ಒಂಟಗೂಡಿ ನಿರೂಪಿಸಿದರು. ವ್ಹಿ.ಎಚ್.ಬಾಲರಡ್ಡಿ ವಂದಿಸಿದರು.