ಗೋಕಾಕ:ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳಿ : ಶಾಸಕ ರಮೇಶ ಸೂಚನೆ

ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳಿ : ಶಾಸಕ ರಮೇಶ ಸೂಚನೆ
ಗೋಕಾಕ ಮೇ 28 : ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಮೂನ್ಸೂಚನೆ ಇದ್ದು ಮಳೆ ಹಾಗೂ ಪ್ರವಾಹವನ್ನು ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಬುಧವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಕೋವಿಡ್ ರೂಪಾಂತರಿ ತಳಿಯ ಸ್ಥಳೀಯವಾಗಿ ಯಾವುದೇ ಪ್ರಕರಣವಿಲ್ಲದ್ದರು ತಾವುಗಳು ಕೋವಿಡ್ ಬಗ್ಗೆ ಹೆಚ್ಚಿನ ಜಾಗೃತೆವಹಿಸಬೇಕು. ಆರೋಗ್ಯ ಇಲಾಖೆ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಔಷಧಗಳ ದಾಸ್ತಾನಿನೊಂದಿಗೆ ಎಲ್ಲ ಸಿಬ್ಬಂಧಿ ಕಾರ್ಯಪ್ರವೃತ್ತರಾಗಬೇಕು ಎಂದರು.
ನೀರಾವರಿ ಇಲಾಖೆಯವರು ನದಿಗಳ ನೀರಿನ ಪ್ರಮಾಣದ ಮೇಲೆ ನಿಗಾವಹಿಸಿ ಮುಂಜಾಗೃತೆಯಾಗಿ ನದಿ ತೀರದ ಜನರಿಗೆ ತಿಳಿಸುವದರೊಂದಿಗೆ ಯಾವುದೇ ಅನಾಹುತಗಳಾಗದಂತೆ ಕ್ರಮಕೈಗೊಳ್ಳಿ. ಹೆಸ್ಕಾಂನವರು ರೈತರ ಪಂಪ್ ಸೇಟ್ ಹಾಗೂ ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗದಂತೆ ಕಾರ್ಯನಿರ್ವಹಿಸಿ. ನಗರಸಭೆಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರೀತಗತಿಯಲ್ಲಿ ಪೂರ್ಣಗೊಳಿಸಬೇಕು. ನಗರದಲ್ಲಿ ಪ್ರವಾಹ ಬರುವ ಭಾಗಗಳ ಜನರ ಸುರಕ್ಷತೆ ಬಗ್ಗೆ ಕ್ರಮವಹಿಸಿ. ಕೃಷಿ ಇಲಾಖೆಯವರು ಬಿತ್ತನೆ ಬೀಜ, ರಸಗೊಬ್ಬರ ಸೇರಿ ಔಷಧಗಳನ್ನು ರೈತರಿಗೆ ಸಮಪರ್ಕವಾಗಿ ವಿತರಿಸುವ ಕಾರ್ಯವಾಗಬೇಕು. ಪಶು ಸಂಗೋಪನೆ ಇಲಾಖೆಯವರು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಜಾಗೃತೆವಹಿಸಿ ಮೊಬೈಲ್ ವಾಹನದ ಸದ್ಭಳಕೆ ಮಾಡಿಕೊಳ್ಳಿ. ಲೋಕೋಪಯೋಗಿ ಇಲಾಖೆಯವರು ನಗರದ ಎಪಿಎಮ್ಸಿ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಜನರ ಸಂಚಾರಕ್ಕೆ ಮುಕ್ತವಾಗಿಸುವಂತೆ ತಿಳಿಸಿದ ಅವರು, ಎಲ್ಲ ಇಲಾಖೆಗಳು ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
.