ಗೋಕಾಕ:ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ
ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27:
ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ನಗರದ ಶಿಂಗಳಾಪೂರ ಬ್ರಿಜ್ ಬಳಿ ಬುಧವಾರದಂದು ಸಾಯಂಕಾಲ ನಡೆದಿದೆ.
ನಗರದ ವಡ್ಡರ ಓಣಿಯ ಯುವಕ ಪರಶುರಾಮ ಜಾಲಗಾರ ( 26 ) ಘಟಪ್ರಭಾ ನದಿಯಯಲ್ಲಿ ಬುಧವಾರ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ನದಿಗೆ ಬಿದಿದ್ದಾನೆ ಎನ್ನಲಾಗುತ್ತಿದ್ದು, ನದಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ಆದರೆ ಬಾಲಕ
ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ . ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಶಹರ ಪೊಲೀಸರು ಹಾಗೂ ಅಗ್ನಿಶಾಮಕ ದಳವು ಬಾಲಕನ ಶವಕ್ಕಾಗಿ ಶೋಧ ಆರಂಭಿಸಿದ್ದಾರೆ. ಆದರೆ ಇನ್ನುವರೆಗೆ ಶವ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.