RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ

ಗೋಕಾಕ:ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ 

ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27:

ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ನಗರದ ಶಿಂಗಳಾಪೂರ ಬ್ರಿಜ್ ಬಳಿ ಬುಧವಾರದಂದು ಸಾಯಂಕಾಲ ನಡೆದಿದೆ.

ನಗರದ ವಡ್ಡರ ಓಣಿಯ ಯುವಕ ಪರಶುರಾಮ ಜಾಲಗಾರ ( 26 ) ಘಟಪ್ರಭಾ ನದಿಯಯಲ್ಲಿ ಬುಧವಾರ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ನದಿಗೆ ಬಿದಿದ್ದಾನೆ ಎನ್ನಲಾಗುತ್ತಿದ್ದು, ನದಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ಆದರೆ ಬಾಲಕ
ನೀರಿನ ಸೆಳೆತಕ್ಕೆ  ಕೊಚ್ಚಿ ಹೋಗಿದ್ದಾನೆ .  ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ  ಮಾಹಿತಿ  ನೀಡಿದ್ದು,  ಸ್ಥಳಕ್ಕೆ ಆಗಮಿಸಿದ ಶಹರ ಪೊಲೀಸರು ಹಾಗೂ ಅಗ್ನಿಶಾಮಕ ದಳವು ಬಾಲಕನ ಶವಕ್ಕಾಗಿ ಶೋಧ ಆರಂಭಿಸಿದ್ದಾರೆ. ಆದರೆ ಇನ್ನುವರೆಗೆ ಶವ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Related posts: