ಗೋಕಾಕ:ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಪೂಜೆ

ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಪೂಜೆ
ಗೋಕಾಕ ಮಾ 20 : ಯುವ ನಾಯಕ ಅಮರಾನಾಥ ರಮೇಶ ಜಾರಕಿಹೊಳಿ ಅವರ ಜನುಮ ದಿನದ ಅಂಗವಾಗಿ ಗುರುವಾರದಂದು ನಗರದ ಶ್ರೀ ಸಿದ್ಧೇಶ್ವರ ಹಾಗೂ ಶ್ರೀ ದಾನಮ್ಮಾ ದೇವಿ ಟ್ರಸ್ಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಚುನಮರಿ ಮತ್ತು ಸದಸ್ಯರು ಸೇರಿ ಶ್ರೀ ಸಿದ್ಧೇಶ್ವರ ಹಾಗೂ ಶ್ರೀ ದಾನಮ್ಮಾ ದೇವಿ ದೇವಸ್ಥಾನದಲ್ಲಿ ಆಯುಷ್ಯ ಆರೋಗ್ಯ ಸಮೃದ್ಧಿಗೊಳಿಸಲಿ ಎಂದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಈರಯ್ಯ ಹಿರೇಮಠ, ಪ್ರಕಾಶ ಕಂಬಿ, ಅಣ್ಣಪ್ಪಅಣ್ಣಾ ಕಲ್ಯಾಣಶೆಟ್ಟಿ, ದುಂಡಪ್ಪ ಮಗದುಮ್ಮ, ಸೋಮನಾಥ ಮಗದುಮ್ಮ, ಪ್ರಮೋದ ಕುರಬೇಟ, ಕಿರಣ ಕುರಬೇಟ, ವಿಶ್ವನಾಥ ಕುರಬೇಟ, ದಾನು ಕಾಂಬಳೇಕರ ಸೇರಿದಂತೆ ಅನೇಕರು ಇದ್ದರು.