RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮೂರು ವರ್ಷಕ್ಕೂ ಹೆಚ್ಚುಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಗಳ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ:ಮೂರು ವರ್ಷಕ್ಕೂ ಹೆಚ್ಚುಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಗಳ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ 

ಮೂರು ವರ್ಷಕ್ಕೂ ಹೆಚ್ಚುಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಗಳ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ ಫೆ 18 : ಅನೈತಿಕ ಚಟುವಟಿಕೆ, ಕುಡುಕರ, ಗಾಂಜಾ ಹಾವಳಿ ಕಡಿವಾಣ ಹಾಕಿ, ಗೋಕಾಕ ಶಹರ ಮತ್ತು ಗ್ರಾಮೀಣ ಠಾಣೆಯಲ್ಲಿ ಮೂರು ವರ್ಷಕ್ಕೂ ಹೆಚ್ಚುಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ( ಪೇದೆ) ಮತ್ತು ಇತರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರದಂದು ನಗರದ ಡಿ.ವಾಯ್.ಎಸ್‌.ಪಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಸಿಪಿಐ ಮುಖಾಂತರ ಬೆಳಗಾವಿ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಕಳೆದ ಹಲವು ತಿಂಗಳಿನಿಂದ ಗೋಕಾಕ ಫಾಲ್ಸ್ ದಲ್ಲಿ ಮತ್ತು ಗೋಕಾಕ ನಗರದ ಜಲಾಲ ಗಲ್ಲಿ ಸಮೀಪ ನಿರ್ಮಿಸಿರುವ ಹೊಸ ಸೇತುವೆಯಲ್ಲಿ ಸಂಜೆಯಾದರೆ ಸಾಕು ಈ ಪ್ರದೇಶಗಳು ಮದ್ಯವ್ಯಸನಿಗಳ ನೆಚ್ಚಿನ ತಾಣವಾಗುತ್ತಿದೆ. ಸೇತುವೆಯ ಫುಟ್‌ಪಾತ್‌ ಮೇಲೆ ಕುಳಿತು ಗಾಂಜಾ, ಮದ್ಯ ಸೇವನೆ ಮಾಡುವ ಯುವಕರು ಬಾಟಲಿ ಹಾಗೂ ಪ್ಲಾಸ್ಟಿಕ್‌ಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇದ್ದಲ್ಲೇ ತಡರಾತ್ರಿ ಇಲ್ಲಿ ಅನೈತಿಕ ಚಟುವಟಿಕೆಗಳು ಸಹ ನಡೆಯುತ್ತಿವೆ ಹೀಗಾಗಿ ಈ ಸೇತುವೆ ಮೇಲೆ ಬೆಳಿಗ್ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು ,ಕಾರಣ ತಾವುಗಳು ಈ ಎರಡು ಸೇತುವೆಗಳಲ್ಲಿ ಸಾಯಂಕಾಲ ಮತ್ತು ರಾತ್ರಿ ವೇಳೆ ನಿಯಮಿತವಾಗಿ ಪೆಟ್ರೋಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿ ಅಲ್ಲಿ ನಿರಂತರವಾಗಿ ಈ.ಆರ್.ಎಸ್.ಎಸ್‌ (112) ವಾಹನವನ್ನು ನಿಲ್ಲಿಸಿ ಅಲ್ಲಿ ನಡೆಯುತ್ತಿರುವ ಅನೈತಿಕ ಮತ್ತು ಗಾಂಜಾ , ಕುಡುಕರ ಹಾವಳಿಯನ್ನು ತಡೆಯಬೇಕು. ಮತ್ತು ಗೋಕಾಕ ಶಹರ ಪೊಲೀಸ್ ಠಾಣೆ ಮತ್ತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆ ( ಕಾನ್ಸ್ಟೇಬಲ್ ), ಮುಖ್ಯ ಪೊಲೀಸ್ ಪೇದೆ ( ಕಾನ್ಸ್ಟೇಬಲ್ , ) ಮಹಿಳಾ ಪೊಲೀಸ್ ಪೇದೆ (ಕಾನ್ಸ್ಟೇಬಲ್) ಸಹಾಯಕ ಪೊಲೀಸ್ ಉಪ ನಿರೀಕ್ಷಕರನ್ನು ತಕ್ಷಣದಲ್ಲಿ ಜಾರಿ ಬರುವಂತೆ ಬೇರೆಕಡೆ ವರ್ಗಾವಣೆ ಅವರ ಜಾಗೆಗೆ ಹೊಸ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿಕೊಳ್ಳಬೇಕು.ಏಕೆಂದರೆ ಕಳೆದ ಮೂರು ವರ್ಷಕ್ಕೂ ಹೆಚ್ಚು ಕಾಲ ಇಲ್ಲಿಯೇ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು ಕಾನೂನು ಮತ್ತು ಸುವ್ಯವಸ್ಥೆ ಕಪಾಡುವಲ್ಲಿ ವಿಫಲವಾಗುತ್ತಿದ್ದಾರೆ. ಮತ್ತು ಅವರಿಂದ ಭ್ರಷ್ಟಾಚಾರ ಹೆಚ್ಚುತ್ತಿದ್ದು ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರು ಇವರ ನಡೆಯಿಂದ ಬೆಸತ್ತಿದ್ದಾರೆ. ಇವರಿಗೆ ಹೇಳುವವರು ಕೇಳುವವರು ಇಲ್ಲದಾಗಿದ್ದಾರೆ . ಉನ್ನತ ಅಧಿಕಾರಿಗಳಿಗೆ ಹೆದರಿಕೆ ಹಾಕಿ ನಮ್ಮನ್ನು ಇಲ್ಲಿಂದ ಯಾರು ಅಳುಗಾಡಿಸಲು ಆಗುವುದಿಲ್ಲ ಎಂಬ ದರ್ಪವನ್ನು ತೋರುತ್ತಿದ್ದಾರೆ. ಶರಹ ಠಾಣೆಯಲ್ಲಿ ನಾಲ್ಕೈದು ವರ್ಷ ಕರ್ತವ್ಯ ನಿರ್ವಹಿಸಿ ಬೇರೆಕಡೆ ವರ್ಗಾವಣೆಯಾಗಿ ಒಂದು ವರ್ಷ ಸೇವೆ ಸಲ್ಲಿಸಿ ಮತ್ತೆ ಗೋಕಾಕ ಶಹರ ಠಾಣೆಗೆ ವರ್ಗಾವಣೆಗೊಂಡು ಬಂದು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದಾರೆ ಹಾಗಾಗಿ ಇಂತಹ ಪೊಲೀಸ್. ಪೇದೆ ( ಕಾನ್ಸ್ಟೇಬಲ್ )ಗಳನ್ನು ತಕ್ಷಣದಿಂದ ಗೋಕಾಕ ಶಹರ ಠಾಣೆ, ಗ್ರಾಮೀಣ ಠಾಣೆಯಿಂದ ವರ್ಗಾವಣೆ ಮಾಡಿ ಗೋಕಾಕನಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ತಮ್ಮಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಿನಂತಿಸುತ್ತದೆ. ಇದಕ್ಕೆ ತಪ್ಪಿದಲ್ಲಿ ಬೆಳಗಾವಿ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಉತ್ತರ ವಲಯ), ಬೆಳಗಾವಿ ಇವರ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ನಯೀಮ ಜಮಾದಾರ, ಹನೀಫ್ ಸನದಿ, ಪಪ್ಪು ಹಂದಿಗುಂದ, ಮಹಾದೇವ ಮಕ್ಕಳಗೇರಿ, ಬಸವರಾಜ ಗಾಡಿವಡ್ಡರ, ಮಲ್ಲು ಸಂಪಗಾರ, ರಮೇಶ್ ಕಮತಿ, ಕೆಂಪಣ್ಣ ಹಕ್ಯಾಗೋಳ, ಕೆಂಪಣ್ಣ ಕಡಕೋಳ, ಮಹಾಲಿಂಗ ಕುರಬೇಟ್, ಪ್ರೇಮಕುಮಾರ ಪೂಜೇರಿ, ಸುರೇಶ್ ಜಳ್ಳಿ, ರಾಜು ಶಿಂಧೆ, ಸುನೀಲ್ ಹಮ್ಮನ್ನವರ, ಕುಮಾರ ಕುರಬೇಟ್, ಮನೋಹರ್ ಭಾಗನ್ನವರ, ರಾಮ ಕುಡ್ಡೆಮಿ,ಗಣಪತಿ ಜಾಗನೂರ, ಭೀಮಶಿ ಚುಡಪ್ಪಗೋಳ, ಜಡೆಪ್ಪ ಸಂಪಗಾರ, ಮಂಜು ಜಾಗನೂರ, ಜಗದೀಶ್ ರಾಣಪ್ಪಗೋಳ, ಕಿರಣ ತೋಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: