ಗೋಕಾಕ:ಸೆಪ್ಟೆಂಬರ್ 1 ರಂದು ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ : ಮಹಾಂತೇಶ ತಾವಂಶಿ ಮಾಹಿತಿ

ಸೆಪ್ಟೆಂಬರ್ 1 ರಂದು ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ : ಮಹಾಂತೇಶ ತಾವಂಶಿ ಮಾಹಿತಿ
ಗೋಕಾಕ ಅ 29 : ಚೌರಿ ಹಾಗೂ ಜೇಡರ ಅಭಿಮಾನಿ ವೃಂದ, ಅಡಿಹುಡಿ – ಗೋಕಾಕ ಹಾಗೂ ಗೋಕಾವಿ ಗೆಳೆಯರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಎಸ್ ಚೌರಿ ಅವರ ಅಭಿನಂದನಾ ಸಮಾರಂಭ ಹಾಗೂ ಪ್ರಾ.ಜಯಾನಂದ ಮಾದರ ಸಂಪಾದಿತ ಮಕ್ಕಳ ಚೌರೀಶ ಅಭಿನಂದನ ಗ್ರಂಥ , ಇತರ ಪುಸ್ತಕಗಳ ಲೋಕಾರ್ಪಣೆ ಮತ್ತು ಆದರ್ಶ ಗುರುಮಾತೆ ಶ್ರೀಮತಿ ಸುಶೀಲಾ ಮಲ್ಲಪ್ಪ ಜೇಡರ ಇವರ ನಿವೃತ್ತಿ ಗೌರವ ಸನ್ಮಾನ ಸಮಾರಂಭವು ದಿನಾಂಕ 1 ರಂದು ನಗರದ ನಗರಸಭೆ ಸಮುದಾಯ ಭವನದಲ್ಲಿ ಮುಂಜಾನೆ 10:30ಕ್ಕೆ ಜರುಗಲಿದೆ ಎಂದು ಡಾ.ಲಕ್ಷ್ಮಣ ಚೌರಿ ಅಭಿನಂದನ ಸಮಿತಿ ಅಧ್ಯಕ್ಷ ಮಹಾಂತೇಶ ತಾವಂಶಿ ಹೇಳಿದರು.
ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಹಾಂತೇಶ ತಾವಂಶಿ ವಹಿಸವರು . ಗ್ರಂಥಗಳ ಲೋಕಾರ್ಪಣೆಯನ್ನು ಕಾದಂಬರಿಕಾರ ಕುಂ ವೀರಭದ್ರಪ್ಪ ಮಾಡುವರು. ಸಂಪಾದನ ಸಾಹಿತ್ಯವನ್ನು ಡಿ.ಮಹೇಂದ್ರ ಹಾಗೂ ಅಭಿನಂದನ ಭಾಷಣವನ್ನು ಡಿ.ವ್ಹಿ ಹಿರೇಮಠ ಮಾಡುವರು .ಮುಖ್ಯ ಅತಿಥಿಗಳಾಗಿ ರೇಖಾ ಎಸ್ ಸಾಯನ್ನವರ, ಪ್ರೋ ಚಂದ್ರಶೇಖರ್ ಅಕ್ಕಿ , ಜಿ.ಬಿ.ಬಳಗಾರ, ಎ.ಸಿ.ಮನ್ನಿಕೇರಿ, ಮಾರುತಿ ಜಡಿನವರ , ಸೈದಪ್ಪ ಗದಾಡಿ ಆಗಮಿಸಲಿದ್ದಾರೆ.
ಸಂಜೆ ನಡೆಯುವ ಗೌವರ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಖಡಕಬಾವಿಯ ಶ್ರೀ ಆಭಿನವ ಧರೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷೆತೆಯನ್ನು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ವಹಿಸುವರು, ಸಮಾರೋಪ ಭಾಷಣವನ್ನು ಡಾ.ಸಿ.ಕೆ.ನಾವಲಗಿ ಮಾಡುವರು.
ಮುಖ್ಯ ಅತಿಥಿಗಳಾಗಿ ವಾಯ್.ಬಿ.ಪಾಟೀಲ, ಭಾರತಿ ಮದಬಾವಿ, ರತ್ನಂಜಯ ಕದ್ದು, ಶ್ರೀಶೈಲ ದರೂರ, ಜಯಕುಮಾರ್ ಸನದಿ, ಶಿವಾನಂದ ಉಪ್ಪಾರ, ಮಹಾಲಿಂಗ ಮಂಗಿ, ಶಿವಲಿಂಗ ಶೆಟ್ಟೆನವರ ಆಗಮಿಸಿಲಿದ್ದಾರೆ.
ಸಾಹಿತ್ಯ ಆಸಕ್ತರು ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋ಼ಳಿಸಬೇಕು ಎಂದು ತಾವಂಶಿ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಡಾ.ಸಿ.ಕೆ.ನಾವಲಗಿ, ಜಯಾನಂದ ಮಾದರ, ರಜನಿ ಜಿರಗ್ಯಾಳ, ಸಂಗೀತಾ ಬನ್ನೂರ, ಅಶೋಕ ಲಗಮಪ್ಪಗೋಳ, ಬಸವರಾಜ ಖಾನಪ್ಪನವರ, ಬಲದೇವ ಸಣ್ಣಕ್ಕಿ, ಡಾ.ಉದ್ದಣ್ಣಾ ಗೋಡೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.