RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅವಿರತವಾಗಿ ಶ್ರಮಿಸುತ್ತಿದೆ‌ : ಮುರುಘರಾಜೇಂದ್ರ ಶ್ರೀ

ಗೋಕಾಕ:ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅವಿರತವಾಗಿ ಶ್ರಮಿಸುತ್ತಿದೆ‌ : ಮುರುಘರಾಜೇಂದ್ರ ಶ್ರೀ 

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅವಿರತವಾಗಿ ಶ್ರಮಿಸುತ್ತಿದೆ‌ : ಮುರುಘರಾಜೇಂದ್ರ ಶ್ರೀ

ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಸೆ 22 :

 

ನಗರದ ಪ್ರತಿಷ್ಠಿತ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರ 25ನೇ ಹುಟ್ಟು ಹಬ್ಬವನ್ನು 4500 ವಿದ್ಯಾರ್ಥಿಗಳಿಗೆ ನೋಟಬುಕ್ಕ ಮತ್ತು ಪೆನ್ ಗಳನ್ನು ವಿತರಿಸುವ ಮೂಲಕ ಗುರುವಾರದಂದು ನಗರದ ಎಲ್.ಇ.ಟಿ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಗರದ ಎಲ್.ಇ.ಟಿ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ‌. ಕಳೆದ 3 ದಶಕಗಳಿಂದ ರಾಜಕೀಯ ಜೊತೆಗೆ ಶೈಕ್ಷಣಿಕವಾಗಿ ಜನರು ಮುಂದೆ ಬರಬೇಕು ಎಂಬ ಮಹದಾಸೆಯಿಂದ ಡಾ.ಭೀಮಶಿ ಜಾರಕಿಹೊಳಿ ಅವರು ತೆರೆದಿರುವ ಈ ಸಂಸ್ಥೆಯಯನ್ನು ಯುವ ಧುರೀಣ ಸನತ ಜಾರಕಿಹೊಳಿ ಅವರು ಮುಂದೆ ನಡೆಸಿಕೊಂಡು ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಆಶಾ ಕಿರಣವಾಗುವದರ ಜೊತೆಗೆ ಬಡವರ, ದೀನ ದಲಿತರ ಕಣ್ಣಿರು ಒರೆಸುವ ಕಾರ್ಯ ಸನತ ಮತ್ತು ಸರ್ವೋತ್ತಮ ಮಾಡುತ್ತಿರುವದು ಶ್ಲಾಘನೀಯ.
ಬರೀ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳದೆ ಬಡವರ, ನೋಂದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ ಮಾಡುತ್ತಿರುವದು ಅವರಲ್ಲಿಯ ಒಳ್ಳೆಯ ಸಂಸ್ಕಾರಗಳನ್ನು ಎತ್ತಿ ತೋರಿಸುತ್ತದೆ. ಅಧಿಕಾರ ಅಂತ್ತಸ್ತು ಶ್ವಾಶವತ ವಲ್ಲ ನಾವು ಸಮಾಜಕ್ಕೆ ನೀಡುವ ಕೊಡುಗೆ ಅವಿಸ್ಮರಣೀಯ ಆ ದಿಸೆಯಲ್ಲಿ ಸನತ ಅವರು ತಮ್ಮ 25ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಬಡ ವಿದ್ಯಾರ್ಥಿಗಳಿಗೆ ನೋಟಬುಕ್ಕಗಳನ್ನು ನೀಡುವ ಮೂಲಕ ಹುಟ್ಟು ಹಬ್ಬವನ್ನು ಸಾರ್ಥಕವಾಗಿ ಆಚರಿಸಿಕೊಂಡಿದ್ದಾರೆ . ಮುಂದಿನ ದಿನಗಳಲ್ಲಿ ಇವರಿಂದ ಇನ್ನೂ ಹೆಚ್ಚು, ಹೆಚ್ಚು ಕಾರ್ಯ ನಡೆಯಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಓದುವ 4 ಸಾವಿರ ಐದುನೂರ ವಿದ್ಯಾರ್ಥಿಗಳಿಗೆ ನೋಟಬುಕ್ಕ ಪೆನ್ ವಿತರಿಸಲಾಯಿತು.
ವೇದಿಕೆಯಲ್ಲಿ ಯುವ ಧುರೀಣರಾದ ಸಂತೋಷ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ.ಎಂ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: