ಗೋಕಾಕ;ಮಹಾರಾಣಾ ಪ್ರತಾಪಸಿಂಹರ ಜಯಂತಿಯನ್ನು ಸರಕಾರಿ ಜಯಂತಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಮನವಿ
ಮಹಾರಾಣಾ ಪ್ರತಾಪಸಿಂಹರ ಜಯಂತಿಯನ್ನು ಸರಕಾರಿ ಜಯಂತಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 9 :
ಮಹಾರಾಣಾ ಪ್ರತಾಪಸಿಂಹರ ಜಯಂತಿಯನ್ನು ಸರಕಾರಿ ಜಯಂತಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ ರಜಪೂತ ಸೇವಾ ಸಮಿತಿ ಅವರು ಸೋಮವಾರದಂದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಹಿಂದೂ ಸಮಾಜ ರಕ್ಷಕ ಶೂರ ವೀರ ಮಹಾರಾಣಾ ಜಯಂತಿಯನ್ನು ಸರಕಾರಿ ಜಯಂತಿ ಎಂದು ಘೋಷಿಸಬೇಕು. ಈಗಾಗಲೇ ಅನೇಕ ಮಹಾಪುರುಷರ ಜಯಂತಿಯನ್ನು ಸರಕಾರಿ ಜಯಂತಿ ಎಂದು ಘೋಷಣೆ ಮಾಡಿದ್ದು, ಅದೇ ರೀತಿ ಮಹಾರಾಣಾ ಪ್ರತಾಪಸಿಂಹರ ಜಯಂತಿಯನ್ನು ಸರಕಾರಿ ಜಯಂತಿ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಗಣುಸಿಂಗ ರಜಪೂತ್, ರಾಜಶೇಖರ್ ರಜಪೂತ, ಸುಭಾಶಸಿಂಗ ರಜಪೂತ್, ಪ್ರವಿಣರಾಜ ರಜಪೂತ್, ಆದಪ್ಪ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.