RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಅಧಿಕಾರ ನೀಡಿದರೆ ಖಂಡಿತವಾಗಿ ಗೋಕಾಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ : ಶಾಸಕ ಸತೀಶ

ಗೋಕಾಕ:ಅಧಿಕಾರ ನೀಡಿದರೆ ಖಂಡಿತವಾಗಿ ಗೋಕಾಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ : ಶಾಸಕ ಸತೀಶ 

ಅಧಿಕಾರ ನೀಡಿದರೆ ಖಂಡಿತವಾಗಿ ಗೋಕಾಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ : ಶಾಸಕ ಸತೀಶ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 :

 

ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು

ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ಇಲ್ಲಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿವಂಗತ ಬಿ.ಆರ್.ಅರಶಿನಗೋಡಿ ಹಾಗೂ ದಿವಂಗತ ಬಸವಣ್ಣೆಪ್ಪಾ ಹೋಸಮನಿ ಇವರ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು .

ಗೋಕಾಕ ನಾಡು ಮುಂಚೆಯಿಂದಲು ಕಲಾವಿದರಿಗೆ ವರದಾನವಾಗಿದೆ ಕಳೆದ 20 ವರ್ಷಗಳಿಂದ ಇಲ್ಲಿನ ಸಾಹಿತಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿಲಾಗಿದ್ದು, ಮುಂದೆಯೂ ಸಹ ಗೋಕಾಕ ನಾಡಿನ ಕಲಾವಿದರನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವದು. ಜಾನಪದ , ರಂಗ ಕಲೆಗಳು ನಶಿಸಿಹೊಗುತ್ತಿವೆ. ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಇಲ್ಲಿನ ಸಾಹಿತಿ, ಕಲಾವಿದರು ಕಲೆಯ ಸೇವೆಯನ್ನು ಮಾಡುತಾ ಗೋಕಾವಿ ನಾಡಿನ ಕೀರ್ತಿಯನ್ನು ಉತುಂಗಕ್ಕೆ ಏರಿಸಿದ್ದಾರೆ ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ.

ಅಧಿಕಾರ ನೀಡಿದರೆ ರಂಗ ಮಂದಿರ ನಿರ್ಮಾಣ : ಗೋಕಾಕ ನಾಡಿನಲ್ಲಿ ರಂಗ ಮಂದಿರ ನಿರ್ಮಾಣವಾಗಬೇಕು ಎಂಬುವುದು ಬಹು ದಿನಗಳ ಬೇಡಿಕೆಯಾಗಿದೆ . ಆದರೆ ಅದನ್ನು ನಿರ್ಮಾಣ ಮಾಡಲು ನನಗೆ ಅಧಿಕಾರ ಇಲ್ಲ ಮೊನ್ನೆ ನನಗೆ ಅಧಿಕಾರ ನೀಡಲು ನಿಮಗೆ ಅವಕಾಶ ದೊರೆತರು ತಾವು ನನಗೆ ಅಧಿಕಾರ ನೀಡಲಿಲ್ಲ ಎಂದು ಸಭೆಯನ್ನು ನಗೆಗಡಲಲ್ಲಿ ತೆಲಿಸಿದ ಸತೀಶ ಅವರು ಮುಂದಿನ ದಿನಗಳಲ್ಲಿ ತಾವು ನನಗೆ ಅಧಿಕಾರ ನೀಡಿದರೆ ಖಂಡಿತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು. ಗೋಕಾಕದಲ್ಲಿ ಕಬಡ್ಡಿ ಆಟವಾಡಲು ನನಗೆ ಅವಕಾಶ ದೊರೆತಿಲ್ಲಾ ನಾನು ಮೈದಾನದ ಹೋರಗೆ ಕುಳಿತಿದ್ದೇನೆ. ಹೋರಗಡೆ ಕುಳಿತರು ಸಹ ಗೋಕಾಕ ನಾಡಿನ ಹೆಸರು ತರಲು ಎಲ್ಲ ಪ್ರಯತ್ನ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಮುಂದೆ ನಾನೇ ಚುನಾವಣೆಗೆ ನಿಲ್ಲುತ್ತೇನೆ ಆಗಾದರೂ ನನಗೆ ಸಹಕಾರ ನೀಡಬೇಕು ಎಂದರು ಶಾಸಕ ಸತೀಶ ಜಾರಕಿಹೊಳಿ ಮನವಿ ಮಾಡಿಕೊಂಡರು .

ಕಿರುತೆರೆ ನಟಿ ವೀಣಾ ಕಟ್ಟಿ ಮಾತನಾಡಿ ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿಯ ಪ್ರತಿಕವಾದ ರಂಗಭೂಮಿಯನ್ನು ಉಳಿಸಿ ಬೆಳೆಸಲು ಕಲಾಪೋಷಕರು ಹಾಗೂ ಕಲಾವಿದರು ಮುಂದೆ ಬರುವಂತೆ ಕೋರಿದರು

ಪ್ರಶಸ್ತಿ ವಿತರಿಸಿ ಮಾತನಾಡಿದ ಚಲನಚಿತ್ರ ನಟ ಹಾಗೂ ಜಾನಪದ ಗಾಯಕ ಗುರುರಾಜ ಹೋಸಕೋಟಿ ಮಹಾನ ಕಲಾವಿದರ ತ್ಯಾಗದಿಂದ ಹುಟ್ಟುಹಾಕಿದ ರಂಗಭೂಮಿ ಹಾಗೂ ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಕಲಾವಿದರನ್ನು ಬೆಳೆಸಿದರೆ ಅವರು ಕಲೆಯನ್ನು ಉಳಿಸುತ್ತಾರೆ. ಕಲಾಪೋಷಕರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಈ ಕಲೆಯನ್ನು ಹೆಮ್ಮರವಾಗಿ ಬೆಳೆಸುವಂತೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ರಂಗಭೂಮಿ ದ್ರೋಣ ದಿ. ಬಿ.ಆರ್.ಅರಶಿಣಗೋಡಿ ರಂಗ ಪ್ರಶಸ್ತಿಯನ್ನು ಗಂಗಾವತಿಯ ಹಗಲುವೇಷ ಕಲಾವಿದ ವಿಭೂತಿ ದುಂಡಪ್ಪ ಹಾಗೂ ರಂಗಭೂಮಿ ಭೀಷ್ಮ ದಿ.ಬಸವಣ್ಣೆಪ್ಪಾ ಸೋಸಮನಿ ರಂಗ ಪ್ರಶಸ್ತಿಯನ್ನು ಅರಬಾಂವಿಯ ಸಣ್ಣಾಟ ಕಲಾವಿದೆ ಶ್ರೀಮತಿ ಲಕ್ಷ್ಮೀ ಹರಿಜನ ಇವರಿಗೆ ನೀಡಿ ಗೌರವಿಸಲಾಯಿತು.

ಕಲಾವಿದರ ಕುರಿತು ಸಾಹಿತಿ ಭಾರತಿ ಮದಬಾಂವಿ ಹಾಗೂ ಪ್ರಾಚಾರ್ಯ ಜಯಾನಂದ ಮಾದರ ಉಪನ್ಯಾಸ ನೀಡಿದರು

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು‌,ಅಧ್ಯಕ್ಷೆತೆಯನ್ನು ಅಶೋಕ ಪೂಜಾರಿ ವಹಿಸಿದ್ದರು
ವೇದಿಕೆಯ ಮೇಲೆ ಆಶಾ ಕಿರಣ ಕಲಾ ಟ್ರಸ್ಟನ ಅಧ್ಯಕ್ಷೆ ಶ್ರೀಮತಿ ಮಾಲತಿಶ್ರೀ ಮೈಸೂರು , ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ ತಾಂವಶಿ, ಸಾಹಿತಿ ಪ್ರೋ ಚಂದ್ರಶೇಖರ್ ಅಕ್ಕಿ , ಮಾಜಿ ನಗರಾಧ್ಯಕ್ಷ ಸಿದ್ದಲಿಂಗಪ್ಪ ದಳವಾಯಿ , ಶಾಮಾನಂದ ಪೂಜೇರಿ , ಶ್ರೀಮತಿ ರಜನಿ ಜಿರಗ್ಯಾಳ , ಶಂಕರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Related posts: