RNI NO. KARKAN/2006/27779|Saturday, June 14, 2025
You are here: Home » breaking news » ಬೆಟಗೇರಿ:ಪತ್ರಿಕಾ ವಿತರಕರ ಹಾಗೂ ಪತ್ರಕರ್ತರ ಸೇವೆ ಮೆಚ್ಚುವಂತದ್ದು: ಸಂತೋಷ ಮಹಾಲ್ಮನಿ

ಬೆಟಗೇರಿ:ಪತ್ರಿಕಾ ವಿತರಕರ ಹಾಗೂ ಪತ್ರಕರ್ತರ ಸೇವೆ ಮೆಚ್ಚುವಂತದ್ದು: ಸಂತೋಷ ಮಹಾಲ್ಮನಿ 

ಪತ್ರಿಕಾ ವಿತರಕರ ಹಾಗೂ ಪತ್ರಕರ್ತರ ಸೇವೆ ಮೆಚ್ಚುವಂತದ್ದು: ಸಂತೋಷ ಮಹಾಲ್ಮನಿ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜೂ 18 :

 

ಮನೆಮನೆಗೆ ದಿನ ಪತ್ರಿಕೆ ವಿತರಿಸುವ ವಿತರಕರು, ಸುದ್ಧಿ ಬಿತ್ತರಿಸುತ್ತಿರುವ ಪತ್ರಕರ್ತರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಸ್ಥಳೀಯ ಮಹಾಲಕ್ಷ್ಮೀ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ಮಾಲೀಕ ಸಂತೋಷ ಮಹಾಲ್ಮನಿ ಹೇಳಿದರು.
ಬೆಟಗೇರಿ ಗ್ರಾಮದ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ವತಿಯಿಂದ ಮಾಲೀಕ ಸಂತೋಷ ಮಹಾಲ್ಮನಿ ಅವರು ಸ್ಥಳೀಯ ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೆ ಶುಕ್ರವಾರ ಜೂ.18ರಂದು ಮಾಸ್ಕ್ ಮತ್ತು ಸ್ಯಾನಿಟೈಜ್‍ರ್ ಹಾಗೂ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕರೊನಾ ಎರಡನೇ ಅಲೆ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲಾ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸರ್ಕಾರದ ಮಾರ್ಗಸೂಚಿ ಮತ್ತು ಕರೊನಾ ನಿಯಂತ್ರಣದ ನಿಯಮಗಳನ್ನು ತಪ್ಪದೇ ಅನುಸರಿಸಬೇಕು ಎಂದರು.
ಸ್ಥಳೀಯ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್ ವತಿಯಿಂದ ಮಾಲೀಕ ಸಂತೋಷ ಮಹಾಲ್ಮನಿ ಅವರು ಇಲ್ಲಿಯ ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೆ ಶುಕ್ರವಾರ ಜೂ.18ರಂದು ಮಾಸ್ಕ್ ಮತ್ತು ಸ್ಯಾನಿಟೈಜ್‍ರ್ ಹಾಗೂ ದಿನಸಿ ಕಿಟ್ ವಿತರಿಸಿದರು.
ಮುಖಂಡ ಯಮನಪ್ಪ ವಾಳದ, ಡಾ. ಮಲ್ಲಿಕಾರ್ಜುನ ಪಾಟೀಲ, ಪತ್ರಕರ್ತ ಅಡಿವೇಶ ಮುಧೋಳ, ಬದ್ರು ನಾವಿ, ಪವನ ಮುಧೋಳ, ಬ್ರಹ್ಮಾನಂದ ಬಾಣಸಿ, ಪತ್ರಿಕಾ ವಿತರಕರು, ಇತರರು ಇದ್ದರು.

Related posts: