ಗೋಕಾಕ:ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ
ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :
ಕರ್ನಾಟಕ ಲಲಿತಕಲಾ ಅಕಾಡೆಮಿಯು, ಗಡಿಯಾಚೆಗಿನ ಕಲಾ ಸಂಸ್ಕøತಿಯ ಅಧ್ಯಯನಕ್ಕೆ ಉತ್ತೇಜನ ನೀಡಲು. ಕ್ರೀಯಾಯೋಜನೆ ಹಮ್ಮಿಕೊಂಡಿದೆ. ಗಡಿನಾಡಿನಲ್ಲಿ ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ ಎಂದು ಕರ್ನಾಟಕ ಲಲತಕಲಾ ಅಕಾಡೆಮಿಯ ಅಧ್ಯಕ್ಷ ಮಹೇಂದ್ರ ಡಿ. ಹೇಳಿದರು.
ಅವರು ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು. ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ, ಮೂರುದಿನಗಳ ಜಾನಪದ ಪೇಂಟಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತಾನಾಡುತ್ತಾ ಅಕಾಡೆಮಿಯು ಕಲಾ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣದ ಉದ್ದೇಶಕ್ಕಾಗಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದರೊಂದಿಗೆ ಸೀನಿಯರ, ಜ್ಯುನಿಯರ ಫೆಲೋಶಿಪ್ ಜೊತೆಗೆ ರಾಜ್ಯದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಿಗೆ ವೃತ್ತಿ ಕೌಶಲ್ಯ ಕಾರ್ಯಾಗಾರವನ್ನು ಧಾರವಾಡ ಹಾಗೂ ಕಲಬುರ್ಗಿ ವಿಭಾಗದವರಿಗೆ ರಾಯಚೂರ ಮತ್ತು ಮೈಸೂರ ಮತ್ತು ಬೆಂಗಳೂರು ವಿಭಾಗದವರಿಗೆ ಉಡಪಿಯಲ್ಲಿ ನಡೆಸಲಿದೆ, ಎಂದರು.
ಅಂತರಾಷ್ಟ್ರೀಯ ಚಿತ್ರಕಲಾವಿದ ಡಾ. ಬಾಬೂರಾವ್ ನಡೋಣಿ ತರಬೇತಿ ಉದ್ಘಾಟಿಸಿ ಕಲಾವಿದರು ಕ್ರೀಯಾಶಿಲ ವ್ಯಕ್ತಿತ್ವದಿಂದ ಬದುಕು ಕಟ್ಟಿಕೊಳ್ಳಬೇಕು ಮತ್ತು ಸಮಾಜಕ್ಕೆ ಸಂಸ್ಕøತಿಕ ಕೊಡುಗೆ ನೀಡುವುದರೊಂದಿಗೆ ಆದರ್ಶಪ್ರಾಯರಾಗಿರಬೇಕೆಂದು ಹೇಳಿದರು.
ಹಿ.ಡ್ಯಾಂನ ಕೆ.ಆರ್.ಇ.ಸೊಸೈಟಿ ಚೇರಮನ್ನರು ಬಸವರಾಜ ಕಡಖಬಾವಿ ಹಾಗೂ ರಾಯಭಾಗದ ವಕೀಲ ಸಾಗರ ಜಂಡೆನ್ನವರ ಮೂಖ್ಯೋಪಾಧ್ಯಾಯ ಉದಯಕುಮಾರ ಕಮ್ಮಾರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ಹಾಗೂ ಪ್ರಾಚಾರ್ಯ ಜಯಾನಂದ ಸಿ. ಮಾದರ. ಪ್ರಾಸ್ತಾವಿಕ ಮಾತನ್ನಾಡಿದರು. ಹಾವೇರಿ ಜಿಲ್ಲೆ ಶಿಗ್ಗಾವಿಯ ಮಂಜುಳಾ ಕೆ.ವಿ. ಧಾರವಾಡ ಜಿಲ್ಲೆ ನವಲಗುಂದದ ಮಹಾಂತೇಶ ಬೆಳ್ಳಿ, ಬಾಗಲಕೋಟ ಜಿಲ್ಲೆ ಚಿಕ್ಕಾಲಗುಂಡಿಯ ಪರಸಪ್ಪ ಹಾದಿಮನಿ, ಪಾಶ್ಚಾಪುರದ ಸಂಪ್ರದಾಯ ಚಿತ್ರಕಲಾವಿದ ಮಹಾದೇವ ಚಿತ್ರಗಾರ, ಎಂ.ಆರ್. ಹೊಸಕೋಟಿ, ಹಿರಿಯ ರಂಗ ಕಲಾವಿದ ಈಶ್ವರಚಂದ್ರ ಬೆಟಗೇರಿ, ವಿಜಯಕುಮಾರ ಮುಂಗರವಾಡಿ ವೇದಿಕೆ ಮೇಲಿದ್ದರು.
ಕಲೆಗೆ ತಳಸಮುದಾಯದ ಕಲಾವಿದರ ಕೊಡುಗೆ ಅನನ್ಯವಾದುದು.ಬುಡಕಟ್ಟು ಜನಾಂಗದ ಬದುಕೇ ಕಲೆಯಿಂದ ಕೂಡಿದೆ. ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಸಿ. ಮಾದರ. ಹೇಳಿದರು.
ಕೋರೊನಾ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಕೋರೆಂಟೇನ್ ಕ್ಯಾಂಪ ನಡೆಸಿ. ರಾಜ್ಯದ ಎಲ್ಲ ಜಿಲ್ಲೆಯಿಂದ ತಲಾ ಇಬ್ಬರು ಕಲಾವಿದರನ್ನು ಆಯ್ಕೆಮಾಡಿ, ಆರ್ಥಿಕವಾಗಿ ಆತ್ಮಸ್ಥೈರ್ಯ ತುಂಬಿದೆ. ತಳಸಮುದಾಯದ ಕಲಾವಿದರಿಗೆ ಒಂದುಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಸರಕಾರದಿಂದ ಪಡೆಯಲಾಗಿದೆ. ಆದ್ದರಿಂದ ರಾಜ್ಯಾದ್ಯಂತ ಅದೇ ಸಮುದಾಯದ ಅಲಕ್ಷಿತ ಕಲಾವಿದರನ್ನು ಗುರುತಿಸಿ ಶಿಬಿರ, ಕಾರ್ಯಾಗಾರ ತರಬೇತಿ ಪ್ರೋತ್ಸಾಹದಾಯಕ ಕಾರ್ಯಕ್ರಮ ನಡೆಸುವ ಗುರಿ ಹೊಂದಿದೆ, ಎಂದು ಹೇಳಿದರು.
ಶಿಂಗಳಾಪುರದ ಜಾನಪದ ಕಲಾವಿದರಾದ ನಾಮದೇವ ಹರಿಜನ, ರತ್ನವ್ವಾ ಹರಿಜನ, ಕಲಾವತಿ ಚೌಗಲಾ, ಹೋಳಿ ಹುಣ್ಣಿಮೆ ಹಾಗೂ ಸಂಪ್ರದಾಯ ಪದಗಳನ್ನು ಹಾಡಿದರು. ಮಲ್ಲಮ್ಮ ದಳವಾಯಿ ಸ್ವಾಗತಿಸಿದರು. ಆನಂದ ಸೋರಗಾಂವಿ ನಿರೂಪಿಸಿದರು. ಸುಗಂಧಾ ಹೊನಕುಪ್ಪಿ ವಂದಿಸಿದರು.