ಘಟಪ್ರಭಾ:ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ
ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಸೋಲಾರ್ ಬಲ್ಬ ವಿತರಣೆ
ಘಟಪ್ರಭಾ ಸೆ 9 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ಹಾಗೂ 7 ನೇ ವಾರ್ಡಿನಲ್ಲಿರುವ ಎಸ್.ಟಿ.ಜನಾಂಗ ಫಲಾನುಭವಿಗಳಿಗೆ ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2017-18 ನೇ ಸಾಲಿನ ಸೋಲಾರ್ ಬಲ್ಬಗಳನ್ನು ಪ.ಪಂ ಸದಸ್ಯ ಸಲೀಮ ಎಚ್.ಕಬ್ಬೂರ ಶನಿವಾರದಂದು ವಿತರಿಸಿದರು.
ನಂತರ ಮಾತನಾಡಿದ ಅವರು ಎಸ್.ಸಿ.ಎಸ್.ಟಿ.ಜನಾಂಗದ ಫಲಾನುಭವಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರಲ್ಲದೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯರಾದ ಮಲ್ಲೇಶ ಕೋಳಿ. ಇಮ್ರಾನ್ ಬಟಕುರ್ಕಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ, ಗ್ರಾಮಸ್ಥರಾದ ಬಾಳುಮಾರಾಜ ಬೋಸಲೆ, ಮಕ್ಸುದ ಮುಲ್ಲಾ, ಸುರೇಶ ಪೂಜಾರಿ, ಮುತ್ತೇಪ್ಪಾ ನಿಮ್ಮಲದವರ, ಪರಸರಾಮ ಗೋಕಾಕ, ಲಕ್ಷ್ಮೀ ಮೇದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.