RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಎಮ್ಮೆ ಮೇಲೆ ಕುರಿಸಿ ಮಹಾ ಸಿಎಂ ಉದ್ಧವ ಠಾಕ್ರೆಯ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು

ಗೋಕಾಕ:ಎಮ್ಮೆ ಮೇಲೆ ಕುರಿಸಿ ಮಹಾ ಸಿಎಂ ಉದ್ಧವ ಠಾಕ್ರೆಯ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು 

ಎಮ್ಮೆ ಮೇಲೆ ಕುರಿಸಿ ಮಹಾ ಸಿಎಂ ಉದ್ಧವ ಠಾಕ್ರೆಯ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 18 :

 

ಬೆಳಗಾವಿ ಸೇರಿದಂತೆ ಗಡಿಭಾಗದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಲು ಮಹಾ ಸರಕಾರ ಬದ್ದವೆಂದು ಹೇಳಿಕೆ ನೀಡಿರುವ ಮಹಾ ಸಿಎಂ ಹೇಳಿಕೆಯನ್ನು ವಿರೋಧಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಸೋಮವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆಯ ಪ್ರತಿಕೃತಿಯನ್ನು ಎಮ್ಮೆಯ ಮೇಲೆ ಕುರಿಸಿ ಮೆರವಣಿಗೆ ನಡೆಯಿಸಿ ಅವನ ಭೂತದಹನ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಉದ್ದೇಶ ಪೂರ್ವಕವಾಗಿ ಪದೇ ಪದೇ ಕನ್ನಡಿಗರನನ್ನು ಕೆಣಕಿ ಗಡಿ ಖ್ಯಾತೆಯನ್ನು ತಗೆಯುತ್ತಿರುವ ಮಹಾರಾಷ್ಟ್ರದ ಶಿವಸೇನೆಯ ಈ ಕ್ರಮ ಖಂಡನೀಯವಾಗಿದ್ದು, ಮಹಾರಾಷ್ಟ್ರ ರಾಜ್ಯದ ಸಿಎಂ ಆಗಿ ರಾಜ್ಯದ ಅಭಿವೃದ್ಧಿ ಬಿಟ್ಟು ಕರ್ನಾಟಕದ ಕನ್ನಡಿಗರ ಭಾವನೆಗಳಿಗೆ ದಕ್ಕೆ ಉಂಟುಮಾಡುವ ಹಾಗೂ ಕನ್ನಡಿಗರನ್ನು ಕೆರಳಿಸುತ್ತಿರುವ ಸಿಎಂ ಉದ್ಧವ ಠಾಕ್ರೆ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕು ಇಲ್ಲದಿದ್ದರೆ ಕರವೇ ಕಾರ್ಯಕರ್ತರು ಮಹಾರಾಷ್ಟ್ರದ ಒಳಗೆ ನುಗ್ಗಿ ಠಾಕ್ರೆಗೆ ಬುದ್ದಿ ಕಲಿಸಬೇಕಾಗುತ್ತದೆ ಎಂದು ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರುಗಳಾದ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲ್ವಾನ್ , ರಮೇಶ ಕಮತಿ , ಲಕ್ಕಪ್ಪಾ ನೇಸರಗಿ , ಭೀಮರಾಯ ಕಕ್ಕೂಗೋಳ , ಹನೀಪಸಾಬ ಸನದಿ , ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ , ಕಿರಣ ತೊಗರಿ , ಶಂಕರ ಬಂಡಿವಡ್ಡರ , ರಾಮ ಕುಡೆಮ್ಮಿ , ಮಲ್ಲು ಸಂಪಗಾರ , ಕೆಂಪ್ಪಣ್ಣಾ ಕಡಕೋಳ , ಸಂತೋಷ ಬಂಡಿವಡ್ಡರ , ಸುರೇಶ ಬಂಡಿವಡ್ಡರ , ಶೆಟ್ಟೆಪ್ಪಾ ಹರಿಜನ , ಕೆಂಪ್ಪಣ್ಣಾ ಗಾಡಿವಡ್ಡರ , ಯಲ್ಲಪ್ಪಾ ಕಪ್ಪಲಗುದ್ದಿ , ರಮೇಶ ನಾಕಾ , ಯಲ್ಲಪ್ಪಾ ಧರ್ಮಟ್ಟಿ , ಆನಂದ ಬಿರಡಿ ಸತ್ತಾರ ಬೇಪಾರಿ , ದತ್ತು ಕೋಲಕಾರ , ದುಂಡಯ್ಯಾ ಹುಕ್ಕೇರಿಮಠ ಇದ್ದರು.

Related posts: