RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮಿಸೋಣ : ಬಿಇಒ ಬಳಗಾರ

ಗೋಕಾಕ:ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮಿಸೋಣ : ಬಿಇಒ ಬಳಗಾರ 

ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮಿಸೋಣ : ಬಿಇಒ ಬಳಗಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 16 :   ಶಿಕ್ಷಣ ಇಲಾಖೆ ಹಾಗೂ ಸಂಘಗಳು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಿ ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮಿಸೋಣವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಶನಿವಾರದಂದು ನಗರದ ತಾ.ಪಂ ಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಜರುಗಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗೋಕಾಕ ಘಟಕದ ನೂತನ ಹಾಗೂ ನಿರ್ಗಮಿತ ಪದಾಧಿಕಾರಿಗಳ ಹಾಗೂ ಸದಸ್ಯರಿಗೆ ಬಿಳ್ಕೂಡುಗೆ ಹಾಗೂ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ವಿಶೇಷ ಯೋಜನೆಗಳ ಯಶಸ್ವಿಗೆ ಶಿಕ್ಷಕರ ಸಹಕಾರವೇ ಕಾರಣ. ಒಳ್ಳೆಯ ಕಾರ್ಯಗಳನ್ನು ಪ್ರೋತ್ಸಾಹಿಸುವಂತಹ ದೇಶದಲ್ಲಿರುವ ನಾವುಗಳು ನಮ್ಮ ಜವಾಬ್ದಾರಿಯನ್ನರಿತು ಅದನ್ನು ನಿಭಾಯಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸೋಣ. ಸಚಿವರಾದ ರಮೇಶ ಜಾರಕಿಹೊಳಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿಯೊಂದಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಅದರ ಸದುಪಯೋಗದಿಂದ ಈ ವಲಯವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮಾಡೋಣವೆಂದು ಹೇಳಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗೋಕಾಕ ಘಟಕದ ನೂತನ ಹಾಗೂ ನಿರ್ಗಮಿತ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ವೇದಿಕೆ ಮೇಲೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ.ಆರ್.ಮುರಗೋಡ, ಮುಖ್ಯೋಪಾಧ್ಯಯರುಗಳಾದ ಜಿ.ಆರ್.ಮಾಳಗಿ, ಜಿ.ಆರ್.ಸನದಿ, ಎಸ್.ಎಸ್.ಮಾಳಗಿ, ಜಿ.ಬಿ.ನೇಸರಗಿ, ಸಂಘದ ಅಧ್ಯಕ್ಷೆ ಎಮ್.ವಿ.ಬಾಗೇನ್ನವರ, ಉಪಾಧ್ಯಕ್ಷೆ ಎಸ್.ಆರ್.ಯಡ್ರಾಂವಿ, ಮಾಜಿ ಅಧ್ಯಕ್ಷೆ ಎಸ್.ಎಸ್.ನೇಗಳಿ, ಎ.ಬಿ.ಚೌಗಲಾ ಇದ್ದರು. ಎಮ್.ಕೆ.ಪಾಟೀಲ ಸ್ವಾಗತಿಸಿದರು. ಬಿ.ಎಮ್.ವಣ್ಣೂರ ವಂದಿಸಿದರು.

Related posts: