RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ದಿ. 2 ರಂದು ಶೂನ್ಯ ಸಂಪಾದನ ಮಠದಲ್ಲಿ “ಕತ್ತಲ ಹಾಡು” ತತ್ವ ಪದಗಳ ಕಾರ್ಯಕ್ರಮ

ಗೋಕಾಕ:ದಿ. 2 ರಂದು ಶೂನ್ಯ ಸಂಪಾದನ ಮಠದಲ್ಲಿ “ಕತ್ತಲ ಹಾಡು” ತತ್ವ ಪದಗಳ ಕಾರ್ಯಕ್ರಮ 

ದಿ. 2 ರಂದು ಶೂನ್ಯ ಸಂಪಾದನ ಮಠದಲ್ಲಿ “ಕತ್ತಲ ಹಾಡು” ತತ್ವ ಪದಗಳ ಕಾರ್ಯಕ್ರಮ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 1 :

 
ಗುರುಸ್ಮ್ರತಿ ಬಳಗ,ರಾಹುಲ ಸೊಂಟಕ್ಕಿ ಟ್ರಸ್ಟ್‌ ಮತ್ತು ಶಿವಯೋಗಿ ತತ್ವ ವಿಚಾರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವರ್ಷದ ಆಕರ್ಷಣೆಯಾಗಿ “ಕತ್ತಲ ಹಾಡು” ಎಂಬ ಕಾರ್ಯಕ್ರಮವನ್ನು ಶನಿವಾರ ದಿ 2 ರಂದು ಸಂಜೆ 6-30 ಕ್ಕೆ ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ‌.

ಸಂಪೂರ್ಣ ಕತ್ತಲೆಯಲ್ಲಿ ಪಣತೆಯ ಬೆಳಕಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಶ್ರೇಗೆಂರಿಯ “ನಾದ ಮಣಿನಾಲ್ಕೂರು” ತತ್ವ ಪದಗಳ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಪ್ರಥಮ ಬಾರಿಗೆ ಗೋಕಾಕ ನಗರದಲ್ಲಿ ಜರಗುವ ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಅಗಮಿಸಿ ತತ್ವ ಪದಗಳನ್ನು ಆಲಿಸಿ ಕಾರ್ಯಮಕ್ಕೆ ಶೋಭೆ ತರಬೇಕೆಂದು ಗುರುಸ್ಮ್ರತಿ ಬಳಗ,ರಾಹುಲ ಸೊಂಟಕ್ಕಿ ಟ್ರಸ್ಟ್‌ ಮತ್ತು ಶಿವಯೋಗಿ ತತ್ವ ವಿಚಾರ ವೇದಿಕೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts: