RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಡಾ‌‌. ಬಿ.ಆರ್ ಅಂಬೇಡ್ಕರ ಅವರು ಒಂದು ಜನಾಂಗದ ಸ್ವತ್ತಲ್ಲ ಇಡೀ ಜಗತ್ತಿನ ಸ್ವತ್ತು : ಶರಣ ಬಸವ ದೇವರು

ಗೋಕಾಕ:ಡಾ‌‌. ಬಿ.ಆರ್ ಅಂಬೇಡ್ಕರ ಅವರು ಒಂದು ಜನಾಂಗದ ಸ್ವತ್ತಲ್ಲ ಇಡೀ ಜಗತ್ತಿನ ಸ್ವತ್ತು : ಶರಣ ಬಸವ ದೇವರು 

ಡಾ‌‌. ಬಿ.ಆರ್ ಅಂಬೇಡ್ಕರ ಅವರು ಒಂದು ಜನಾಂಗದ ಸ್ವತ್ತಲ್ಲ ಇಡೀ ಜಗತ್ತಿನ ಸ್ವತ್ತು : ಶರಣ   ಬಸವ ದೇವರು

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 6 :

 

ಡಾ‌‌. ಬಿ.ಆರ್ ಅಂಬೇಡ್ಕರ ಅವರು ಒಂದು ಜನಾಂಗದ ಸ್ವತ್ತಲ್ಲ ಇಡೀ ಜಗತ್ತಿನ ಸ್ವತ್ತು ಎಂದು ಬೆಳವಿಮಠ ಶರಣ  ಬಸವ ದೇವರು ಹೇಳಿದರು

ರವಿವಾರದಂದು ನಗರದ ಮರಾಠಾ ಸಮಾಜದ ಸ್ಮಶಾನ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಯೋಜಿಸಿದ ಮೌಢ್ಯ ವಿರೋಧಿ ಪರಿವರ್ತನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಸ್ತ್ರೀ ಸ್ವಾತಂತ್ರ್ಯವನ್ನು ವಿರೋಧಿಸಿದ ಪುರೋಹಿತ ಶಾಹಿಗಳು ದೇಶದ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರು ಆದರೆ ಡಾ.ಬಿ.ಆರ್‌ ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಸ್ತ್ರೀಯರಿಗೆ ಸಮಾನತೆ ಕೊಡಬೇಕೆಂದು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮ ಇಂದು ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನತೆ ದೊರೆತಿದೆ.

ಭಾರತ ದೇಶ ವಿವಿಧಿತೆಯಲ್ಲಿ ಏಕತೆ ಬೆಳೆದ ದೇಶ . ಧರ್ಮದಲ್ಲಿ ಇರುವ ಅಂಧಕಾರವನ್ನು ತಗೆದು ಹಾಕಬೇಕಾಗಿದೆ ಅದು ಹಿಂತಹ ವೈಚಾರಿಕ ಕಾರ್ಯಗಳಿಂದ ಮಾತ್ರ ಸಾಧ್ಯ. ಜನರು ಜಾತಕ ನೋಡಿ ಜೀವನ ಸಾಗಿಸದೆ ತಮ್ಮ ತೋಳ್ಳಬಲದಿಂದ ಜೀವನ ಸಾಗಿಸಿ, ಮೂಢನಂಬಿಕೆಗೆ ಮೊರೆ ಹೋಗದೆ ಅವುಗಳನ್ನು ಧಿಕ್ಕರಿಸಿ ಜೀವನ ಸಾಗಿಸಬೇಕಾಗಿದೆ.
ನಕ್ಷತ್ರಗಳು ಮನುಷ್ಯನ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬ ಸತ್ಯವನ್ನು ಅರಿತು ನಾವು ಬದುಕು ಸಾಗಿಸಬೇಕು.

ನಮ್ಮನಾಳುವ ಸರಕಾರಗಳು ಮೂಢನಂಬಿಕೆಗಳಿಗೆ ಗುರಿಯಾಗದೆ ಸಂವಿಧಾನ ಎಂಬ ಪವಿತ್ರ ಧರ್ಮಕ್ಕೆ ಬೆಲೆ ಕೊಟ್ಟು ಕಾರ್ಯಮಾಡಬೇಕು. ಡಾ. ಅಂಬೇಡ್ಕರ್ ಅವರು ಮೀಸಲಾತಿ ತಂದಿರುವ ಪರಿಣಾಮ ಇಂದು ಸರಕಾರಗಳು ಮೀಸಲಾತಿಗೆ ತೆಲೆಬಾಗಿ ಎಲ್ಲರಿಗೂ ಸಮಾನ ಅಶಕಾಶ ನೀಡಿವೆ ಆದ್ದರಿಂದ ಇಂದು ನಾವು ಸಂವಿದಾನವನ್ನು ಉಳಿಸಬೇಕಾಗಿದೆ. ಸಂವಿಧಾನವೇ ನಮ್ಮನ್ನು ಉಳಿಸುವ ಏಕಮೇವ ಅಸ್ತ್ರವಾಗಿದ್ದು ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
ರಾಜಕೀಯ ಮರುಭೂಮಿಯಲ್ಲಿ ವೈಚಾರಿಕ ಓಯಸ್ಸನಂತೆ ಸತೀಶ ಜಾರಕಿಹೊಳಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮೌಢ್ಯತೆ ವಿರುದ್ಧ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಡಾ. ಅಂಬೇಡ್ಕರ್ ಅವರ ರಥವನ್ನು ಮುನ್ನಡೆಸುತ್ತಾ ಉತ್ತರ ಕರ್ನಾಟಕದ ಸಮಾಜಿಕ , ರಾಜಕೀಯ ನಕ್ಷತ್ರ ವಾಗಿದ್ದಾರೆ.

ಮತದಾನದ ಹಕ್ಕು ಕೊಟ್ಟಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸು ನನಸಾಗಿಸಲು ಇಂದು ನಾವು ಮತಗಳನ್ನು ಮಾರಿಕೊಳ್ಳದೆ ದಿಟ್ಟ ತನದಿಂದ ಸಮಾಜವನ್ನು ಕಟ್ಟಬೇಕಾಗಿದೆ.ಯಾವುದೇ ದೇವರುಗಳು ನಮ್ಮ ಕೆಲಸಕ್ಕೆ ಬರುವುದಿಲ್ಲ ವೈಚಾರಿಕ ಆಲೋಚನೆ ಇದ್ದವರು ದೇಶವನ್ನು ಬಹುಕಾಲ ಮುನ್ನಡೆಸಿರುವ ಪರಿಣಾಮ ಇಂದು ನಾವು ನೇಮದಿಂದ ಬಾಳುತ್ತಿದ್ದೇವೆ. ಸಮಾಜವನ್ನು ಗಟ್ಟಿಯಾಗಿ ಕಟ್ಟಿದರೆ ಪುರೋಹಿತಶಾಹಿ ದೋರಣೆ ವಿರುದ್ದ ಹೋರಾಡಲು ಸಾಧ್ಯ. ಕಾಣದ ದೇವರುಗಳು ನಮಗೆ ಆದರ್ಶ ವಾಗದೆ ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರು ನಮ್ಮಗಿಂದು ಆದರ್ಶವಾಗಬೇಕು.
ವಿದ್ಯೆ ಮತ್ತು ಜ್ಞಾನ ಇದು ಯಾರ ಸ್ವತ್ತಲ್ಲ, ಅದನ್ನು ಗಳಿಸಿ ಸಮಾಜ ಸುಧಾರಿಸುವ ಕಾರ್ಯ ಮಾಡಬೇಕು.
ಸಮಾಜದಲ್ಲಿನ ಮೂಢನಂಬಿಕೆಗಳನ್ನು ಧಿಕ್ಕರಿಸಿ ಬಾಳಬೇಕಾಗದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಇರಬಾರದು ಎಂಬ ಧ್ಯೇಯ ಇಂದು ಸಾರ್ವತ್ರಿಕವಾಗಬೇಕು. ನಮ್ಮನ್ನು ಯಾರು ದೊಡ್ಡವರನ್ನಾಗಿ ಮಾಡುವುದಿಲ್ಲ ನಮ್ಮಲ್ಲಿರುವ ಜ್ಞಾನ ನಮ್ಮನ್ನು ದೊಡ್ಡದಾಗಿಸುತ್ತದೆ. ಜ್ಞಾನವನ್ನು ಸಂಪಾದಿಸಲು ಶ್ರಮ ವಹಿಸಿ ಕಾರ್ಯಮಾಡಬೇಕಾಗಿದೆ ಎಂದು ಬೆಳವಿ ಮಠದ ಶರಣ  ಬಸವ ದೇವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ , ಮಾಜಿ ಸಚಿವ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ನಾವು ನಂಬಿಕೆಯ ವಿರೋಧಿಗಳಲ್ಲ ನಂಬಿಕೆ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಯ ವಿರೋಧಿಗಳು.ಇಂದಿನ ಸಮಾಜದಲ್ಲಿ ಶಿಕ್ಷಣ ಬೇಡೆಂದವರ ಪೂಜೆ ದಿನನಿತ್ಯ ನಡೆಯುತ್ತಿದೆ ಆದರೆ ವಾಸ್ತವವಾಗಿ ಶಿಕ್ಷಣ ಬೇಕೆಂದವರ ಪೂಜೆ ಆಗಬೇಕಾಗಿದೆ ಅದಕ್ಕಾಗಿ ಹಿಂತಹ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದನ್ನು ಅರಿತು ನಾವು ಬದುಕಬೇಕು.
ಸ್ವಾಮೀ ವಿವೇಕಾನಂದ,ಬುದ್ಧ,ಬಸವ , ಅಂಬೇಡ್ಕರ್ , ಪ್ರೇರಿಯಾರ ಸೇರಿದಂತೆ ಅನೇಕ ವೈಚಾರಿಕ ಚಿಂತಕರ ವಿಚಾರಗಳನ್ನು ನಾವು ಜನರಿಗೆ ತಿಳಿಸುವ ಕಾರ್ಯ ಮಾಡಿ ಸದೃಢ ಸಮಾಜ ನಿರ್ಮಿಸಬೇಕಾಗಿದೆ. ಈ ದಿಸೆಯಲ್ಲಿ ನಿರಂತರ ನಮ್ಮ ಹೋರಾಟ ನಡೆಯುತ್ತದೆ.

ಇಂತಹ ಪ್ರೇರಣಾದಾಯಕ ಮಹಾನಪುರುಷರ ವಿಚಾರಗಳನ್ನು ನಾವು ಇಂದು ತಿಳಿದು ಕೊಳ್ಳಬೇಕಾಗಿದೆ. ಪುರೋಹಿತಶಾಹಿಗಳು ಇದನ್ನು ಮುಚ್ಚಿಡುವ ಕಾರ್ಯ ಮಾಡಿದ್ದಾರೆ. ಕಳೆದ 4 ಸಾವಿರ ವರ್ಷಗಳಿಂದಲೂ ಬೇರುರಿರುವ ಇವರ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಿದೆ. ನಾವು ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವಷ್ಟೆ ಇದು ಯಾರ ವಿರುದ್ಧವು ಅಲ್ಲ ಎಂದ ಸತೀಶ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯಿಂದ ಇಂದು ಸಮಾನತೆ ಬಂದಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಸಂವಿಧಾನವನ್ನು ಇಂದು ನಾವು ಅರಿಯಬೇಕಾಗಿದೆ ಅಂದಾಗ ಮಾತ್ರ ನಾವು ಈ ಹೋರಾಟವನ್ನು ಮುಂದೆ ವರೆಸಲು ಸಾಧ್ಯ. ವಿಶೇಷವಾಗಿ ಮಹಿಳೆಯರು ಮೂಢನಂಬಿಕೆ ಎಂಬ ಮೋಸಕ್ಕೆ ಬಲಿಯಾಗದೆ ಬದಲಾವಣೆ ಹೊಂದಿ . ದೈರ್ಯದಿಂದ ಸಮಾಜ ಕಟ್ಟಬೇಕಾಗಿದೆ. ಇತಿಹಾಸದಲ್ಲಿ ಆದ ಅನ್ಯಾಯಗಳನ್ನು ತಿಳಿದು ಹೋರಾಟ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಾವೆಲ್ಲ ಮುಂದಾಗೋಣಾ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಶ್ರೇಷ್ಠವಾದ ಸಂವಿಧಾನ ಭಾರತದಲ್ಲಿ ಇದೆ.ಅದನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗದೆ. ಧರ್ಮದ ಮೂಲ ಮರೆತು ನಾವಿಂದು ಮೂಢನಂಬಿಕೆಗಳಿಗೆ ಬಲಿಯಾಗಿದ್ದೇವೆ. ವೈಚಾರಿಕ ಚಿಂತನೆ ಮಾಡಿ ಮೂಢನಂಬಿಕೆಯಿಂದ ಹೊರ ಬರಬೇಕಾಗಿದೆ. ಸಮಾಜದ ಬಗ್ಗೆ ಚಿಂತನೆ ಇರುವ ಸತೀಶ ಅವರ ಕಾರ್ಯ ಶ್ಲಾಘನೀಯವಾಗಿದೆ. ಈ ಕಾರ್ಯ ಮುಂದಿನ ದಿನಗಳಿಲ್ಲಿ ದೇಶವ್ಯಾಪಿ ಹರಡುವುದರಲ್ಲಿ ಸಂಶಯವಿಲ್ಲ ಎಂದು ಸತೀಶ ಜಾರಕಿಹೊಳಿ ಅವರು ಆಯೋಜಿಸಿದ ಮೌಢ್ಯ ವಿರೋಧಿ ಕಾರ್ಯಕ್ರಮವನ್ನು ಕೊಂಡಾಡಿದರು.

ವೇದಿಕೆಯ ಮೇಲೆ ಬೆಳಗಾವಿ ಭಂಡಾಯ ಸಾಹಿತ್ಯ ಸಂಘಟನೆಯ ಡಾ.ಯಲ್ಲಪ್ಪ ಹಿಮ್ಮಡಿ, ಚಿಕ್ಕೋಡಿಯ ಖ್ಯಾತ ವಿಚಾರವಾದಿ ಬಿ.ಎಸ್.ನಾಡಕರ್ಣಿ , ಯುವ ಧುರೀಣ ರಾಹುಲ್ ಜಾರಕಿಹೊಳಿ, ಮರಾಠಾ ಸಭಾಜದ ಮುಖಂಡ ಜ್ಯೋತಿಭಾ ಸುಭಂಜಿ, ಮಾನವ ಬಂಧುತ್ವ ವೇದಿಯ ವ್ಯವಸ್ಥಾಪಕ ರಾಮಕೃಷ್ಣ ಪಾನಬುಡೆ ಇದ್ದರು.

Related posts: