RNI NO. KARKAN/2006/27779|Tuesday, April 16, 2024
You are here: Home » breaking news » ಗೋಕಾಕ:ಜಿ.ಪಂ ಇಂಜಿನಿಯರಿಂದ ಲಂಚಕ್ಕೆ ಬೇಡಿಕೆ , ಅಸಭ್ಯ ವರ್ತನೆ : ರೈತ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ

ಗೋಕಾಕ:ಜಿ.ಪಂ ಇಂಜಿನಿಯರಿಂದ ಲಂಚಕ್ಕೆ ಬೇಡಿಕೆ , ಅಸಭ್ಯ ವರ್ತನೆ : ರೈತ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ 

ಜಿ.ಪಂ ಇಂಜಿನಿಯರಿಂದ ಲಂಚಕ್ಕೆ ಬೇಡಿಕೆ , ಅಸಭ್ಯ ವರ್ತನೆ : ರೈತ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 2  :

ಮಳೆಗೆ ಕುಸಿದಿದ್ದ ಮನೆಗಳನ್ನು ಜಿ.ಪಿ.ಎಸ್ ಮಾಡಲು ಜಿ.ಪಂ ಇಂಜಿನಿಯರಗಳು ರೈತರಿಂದ ಲಂಚ ಕೇಳಿ, ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು.

ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ ಜಿ.ಪಂ ಇಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು  1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ ಎಇಇ ಉದಯಕುಮಾರ ಕಾಂಬ್ಳೆ ಅವರು ತಪ್ಪಿಸ್ಥ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಬಾಕಿ ಉಳಿದ ಎಲ್ಲ ರೈತರ ಬಿದ್ದ ಮನೆಗಳ ಜಿಪಿಎಸ ನ್ನು ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು  ಎಂದು ಹೇಳಿ ರೈತರೊಂದಿಗೆ ನಡೆದ ಅಚ್ಚಾತುರ್ಯಕ್ಕೆ ಕ್ಷಮೆ ಕೇಳಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ನಂತರ ರೈತರು ತಹಶೀಲ್ದಾರ ಕಛೇರಿಗೆ ತೆರಳಿ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ ಲಂಚ ಕೇಳಿದ ಇಂಜಿನಿಯರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ ಮುಖಾಂತರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಅರ್ಪಿಸಿದರು.

2019 -20 ನೇ ಸಾಲಿನಲ್ಲಿ ಘಟಪ್ರಭಾ ನದಿಗೆ ಉಂಟಾದ ಪ್ರವಾಹಕ್ಕೆ ನದಿಯ ದಡದಲ್ಲಿ ಇದ್ದಂತಹ ನೂರಾರು ರೈತರು ತಮ್ಮ ಮನೆಗಳನ್ನು ಕಳೆದುಕೊಂಡು ಗುಡಿಗುಂಡಾರ, ಹಾಗೂ ಧರ್ಮಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. ಎರೆಡು ವರ್ಷಗಳು ಕಳೆದರು ಸಹ ಇನ್ನುವರೆಗೆ ಮನೆ ಕಟ್ಟಲು ಸರಕಾರದಿಂದ ಬರಬೇಕಾದ ಅನುಧಾನ ಬಂದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಬೇಕಾದ ಜಿ.ಪಂ ಇಂಜಿನಿಯರ್ ಅವರು  ರೈತರಿಂದ ಮನೆ ಜಿಪಿಎಸ್ ಮಾಡಲು ಲಂಚ ಕೇಳುತ್ತಿದ್ದು, ಹಣ ಕೊಡದವರ ಮನೆಗಳನ್ನು ಲಾಗ ಇನ್ ಮಾಡದೆ ಕೈ ಬಿಟ್ಟಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೋಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಗಣೇಶ  ಇಳಿಗೇರ , ರಮೇಶ ಬುದಿಗೋಪ್ಪ, ಮುತ್ತೆಪ್ಪ ಕುರುಬರ, ಶಂಕರ ಹಡಗಿನಾಳ, ಮಹಾವೀರ ದಪ್ಪಾದುಳಿ, ಶಿವಾನಂದ ಇಳಿಗೇರ, ರಾಜು ಜಿಗತಮ್ಮನವರ, ಸಂಜು ದೇಮನ್ನವರ, ಆಕಾಶ ಬಂಡಿ, ಮಾರುತಿ ಸನದಿ, ವಿಠಲ ಮಹಾಕಾಳಿ, ಮಲೀಕ ಬಳಿಗಾರ, ಸಾಗರ ಬಂಡಿ, ಸಿದ್ದಲಿಂಗ ಪೂಜಾರಿ, ಮಲ್ಲಿಕಾರ್ಜುನ ಇಳಿಗೇರ, ದುರ್ಗಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಇದ್ದರು.

Related posts: