RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ತಾಲೂಕಿನ ಆಡಳಿತ ವ್ಯವಸ್ಥೆಯಿಂದ ಜನ ಭಯಭೀತರಾಗಿದ್ದಾರೆ : ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆರೋಪ

ಗೋಕಾಕ:ತಾಲೂಕಿನ ಆಡಳಿತ ವ್ಯವಸ್ಥೆಯಿಂದ ಜನ ಭಯಭೀತರಾಗಿದ್ದಾರೆ : ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆರೋಪ 

ತಾಲೂಕಿನ ಆಡಳಿತ ವ್ಯವಸ್ಥೆಯಿಂದ ಜನ ಭಯಭೀತರಾಗಿದ್ದಾರೆ : ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆರೋಪ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 29 :

 
ಗೋಕಾಕ ತಾಲೂಕಿನ ಆಡಳಿತ ವ್ಯವಸ್ಥೆಯಿಂದ ಜನ ಭಯಬೀತರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಹೇಳಿದರು

ಗುರುವಾರದಂದು ನಗರದ ಜ್ಞಾನ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೊರೋನಾ ಮಹಾಮಾರಿ ಕಾಯಿಲೆಯಿಂದ ರಾಜಕೀಯವಾಗಿ ಸಕ್ರೀಯವಾಗಿ ಕಾರ್ಯಮಾಡಲು ಸಾದ್ಯವಾಗಿಲ್ಲ ಮುಂದೆ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ ನಿರಂತರ ನಡೆಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನಮ್ಮ ಕ್ಷೇತ್ರದವರಾಗಿದ್ದರು ಸಹ ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ನಿರಾಶ್ರಿತ ಆಗಿರುವ ಕುಟುಂಬಗಳಿಗೆ ಸರಕಾರದಿಂದ ಇನ್ನೂ ಹಣ ಸಂದಾಯವಾಗಿರುವುದು ನಮ್ಮ ಭಾಗದ ದುರ್ದೈವವಾಗಿದೆ. ತಾಲೂಕಿನ ಪೊಲೀಸ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ತಾಲೂಕಿನ ಜನ ಭಯಬೀತರಾಗಿದ್ದಾರೆ. ನಾವು ಜೆಡಿಎಸ್ ನಿಂದ ಹೋರಾಟ ಮಾಡಿದರು ಸಹ ನಮ್ಮ ಹೋರಾಟ ಜಾತ್ಯಾತೀತವಾಗಿರುತ್ತದೆ. ಕಳೆದ ವರ್ಷ ನಾವು ಗೋಕಾಕ ಫಾಲ್ಸದ ದನದ ಓಣಿಯಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಮತ್ತು ಗೋಕಾಕ ಫಾಲ್ಸದಲ್ಲಿರುವ ಸರಕಾರಿ ಜಾಗೆಯಲ್ಲಿ 10 ಸಾವಿರ ಬಡವರಿಗೆ ಮನೆ ಕಲ್ಪಿಸುವಂತೆ ಹೋರಾಟ ಮಾಡಲಾಗಿತ್ತು ವರ್ಷ ಕಳೆದರೂ ಸಹ ಇನ್ನುವರೆಗೆ ಆ ಕಾರ್ಯ ವಾಗಿಲ್ಲ ಈ ಹೋರಾಟ ಸೇರಿದಂತೆ ತಾಲೂಕಿನ ಆಡಳಿತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಲಾಗುವುದು ಈ ನಮ್ಮ ಹೋರಾಟ ತಾಲೂಕಿನ ಆಡಳಿತ ವ್ಯವಸ್ಥೆಯ ವಿರುದ್ಧವಾಗಿದ್ದು, ಜಾರಕಿಹೊಳಿ ಸಹೋದರ ವಿರುದ್ಧವಲ್ಲ ಎಂದು ಅಶೋಕ ಪೂಜಾರಿ ಹೇಳಿದರಲ್ಲದೆ ಗೋಕಾಕ ತಾಲೂಕಿನ ದಶಕಗಳ ಬೇಡಿಕೆಯಾಗಿರುವ ಗೋಕಾಕ ಜಿಲ್ಲಾ ಹೋರಾಟಕ್ಕೆ ಸಹ ಚಾಲನೆ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಸುರೇಶ ಮರಲಿಂಗನ್ನವರ , ಲಿಂಗಪ್ಪ ಅಮಿನಬಾವಿ , ಸಿದ್ದು ಶಿರಸಂಗಿ, ದಸ್ತಗಿರಿ ಪೈಲವಾನ, ಪ್ರಕಾಶ ಬಾಗೋಜಿ, ಸಿ.ಬಿ.ಗಿಡನ್ನವರ , ಬಿಲಾಲ ಕಳ್ಳೋಳಿ ಇದ್ದರು.

Related posts: