RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ

ಬೆಳಗಾವಿ:ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ 

ಗಂಡನನ್ನು ಬಿಟ್ಟು ಪ್ರಿಯತಮನ ಜೊತೆ ಬಂದ ಗೋಕಾಕ ತಾಲೂಕಿನ ಯವತಿ: ರಕ್ಷಣೆ ಕೋರಿ ಪೊಲೀಸರ ಮೋರೆ

ಬೆಳಗಾವಿ ಸೆ 3: ಪ್ರೀತಿಸಿ ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಬ್ಬರು ರಕ್ಷಣೆ ಒದಗಿಸುವಂತೆ ಬೆಳಗಾವಿ ಪೊಲೀಸ ಕಮಿಷನರ್ ಮೋರೆ ಹೋಗಿರುವ ಘಟನೆ ನಡೆದಿದೆ
ರಕ್ಷಣೆ ಜೊತೆಗೆ ತಮಗೆ ನ್ಯಾಯ ಸಿಗದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲಿ ಹಿಡಿದು ಪೊಲೀಸ್ ಕಮಿಷನರ್ ಕಚೇರಿಗೆ ಧಾವಿಸಿದ್ದಾರೆ. 

ಗೋಕಾಕ್ ತಾಲೂಕಿನ ಗ್ರಾಮವೊಂದರ ಯುವತಿ ಮತ್ತು ಬೆಳಗಾವಿ ಮೂಲದ ರಾಘವೇಂದ್ರ ಹಿರೇಮಠ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಯುವತಿ ಮನೆಯವರು ಇವರ ಪ್ರೀತಿಗೆ ವಿರೋಧಿಸಿ ಆಕೆಯ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದಾರೆ

ಆದರೆ ಯುವತಿ ಮಾತ್ರ ತನಗೆ ಈ ಮದುವೆ ಇಷ್ಟ ಇಲ್ಲ. ತಾನು ರಾಘವೇಂದ್ರನನ್ನು ಪ್ರೀತಿಸುತ್ತಿರುವುದಾಗಿ ಮನೆಯವರಿಗೆ ಹಾಗೂ ಮದುವೆ ಗಂಡಿಗೆ ಹೇಳಿದರೂ ಕ್ಯಾರೆ ಎನ್ನದೇ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. 

ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿ ತನಗೆ ಗಂಡನೊಂದಿಗೆ ಬಾಳಲು ಇಷ್ಟವಿಲ್ಲ. ಹೇಗಾದ್ರು ಮಾಡಿ ತನ್ನನ್ನು ಕರೆದುಕೊಂಡು ಹೋಗು. ಇಲ್ಲದಿದ್ದರೆ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ರಾಘವೇಂದ್ರನಿಗೆ ಕರೆ ಮಾಡಿದ್ದಾಳೆ. ಇದಕ್ಕೆ ರಾಘವೇಂದ್ರ, ನಿನ್ನ ಮದುವೆಯಾಗಿದೆ. ನನ್ನ ಪ್ರೀತಿ ಮರೆತು ಚೆನ್ನಾಗಿರು ಎಂದಿದ್ದಾನೆ. ಅದಕ್ಕೆ ಒಪ್ಪದ ಯುವತಿ ನಾಲ್ಕು ದಿನಗಳ ಹಿಂದೆ ಪ್ರಿಯತಮ ರಾಘವೇಂದ್ರನ ಜೊತೆಗೆ ಗಂಡನ ಮನೆ ಬಿಟ್ಟು ಬಂದಿದ್ದಾಳೆ. 

ಸದ್ಯ ಯುವತಿ ಮನೆಯವರು ರಾಘವೇಂದ್ರನ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದು, ಅವರ ಮನೆಯವ್ರಿಗೆ ತೊಂದರೆ ನೀಡುತ್ತಿದ್ದಾರಂತೆ. ದಯವಿಟ್ಟು ನಮಗೆ, ನಮ್ಮ ಕುಟುಂಬದವರಿಗೆ ರಕ್ಷಣೆ ನೀಡಿ ಎಂದು ಪ್ರೇಮಿಗಳಿಬ್ಬರು ಪೊಲೀಸರ ಬಳಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ

Related posts: