RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಕೊರೋನಾ ತಡೆಗಟ್ಟಲು ಸರಕಾರದ ಪ್ರಯತ್ನಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ : ಡಾ.ಜಗದೀಶ ಜಿಂಗಿ

ಗೋಕಾಕ:ಕೊರೋನಾ ತಡೆಗಟ್ಟಲು ಸರಕಾರದ ಪ್ರಯತ್ನಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ : ಡಾ.ಜಗದೀಶ ಜಿಂಗಿ 

ಕೊರೋನಾ ತಡೆಗಟ್ಟಲು ಸರಕಾರದ ಪ್ರಯತ್ನಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ : ಡಾ.ಜಗದೀಶ ಜಿಂಗಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

 

ಕೊರೋನಾ ಹರಡದಂತೆ ತಡೆಗಟ್ಟವಲ್ಲಿ ಸರಕಾರದ ಪ್ರಯತ್ನಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ ಎಂದು ಗೋಕಾಕ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು

ಗುರುವಾರದಂದು ತಾಲೂಕಿನ ದುರದುಂಡಿ ಗ್ರಾಮದಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಟಾಸ್ಕಪೋರ್ಸ ಕಮೀಟಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಲ್ಲಿಯವರೆಗೆ ತಾಲೂಕಿನಲ್ಲಿ 20 ಕೊರೋನಾ ಪ್ರಕಣಗಳು ಪತ್ತೆಯಾಗಿದ್ದು, 2 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ವಯಸ್ಸಾದವರಿಗೆ ಸೋಂಕು ತಗುಲಿದರೆ ಅಪಾಯ ವಿರುತ್ತದೆ. ಆದ್ದರಿಂದ 60 ವರ್ಷ ಮೇಲ್ಪಟ ವಯಸ್ಕರರು ಮತ್ತು 10 ವರ್ಷ ಒಳಗಿನ ಮಕ್ಕಳು ಅನಾವಶ್ಯಕವಾಗಿ ಮನೆಯಿಂದ ಹೊರ ಬರದೆ ಸೋಂಕು ಹರಡದಂತೆ ತಡೆಗಟ್ಟವಲ್ಲಿ ಸಹಕರಿಸಿಬೇಕು.
ತಾಲೂಕಾ ಆಸ್ಪತ್ರೆಗೆ ಬರುವ ಶಂಕಿತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಕಳುಹಿಸಿದವರಲ್ಲಿ ಬಹುತೇಕರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. 20 ಪ್ರಕರಣಗಳು ಪತ್ತೆಯಾಗಿವೆ ಎಂದರೆ ಸರಿಸುಮಾರು 600 ಪ್ರಕರಣಗಳು ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಯಾರು ಭಯ ಪಡದೆ ಜಾಗೃಕತೆಯಿಂದ ಇದ್ದರೆ ಸೋಂಕು ಹರಡದಂತೆ ತಡೆಗಟ್ಟಬಹುದು . ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಪರಿಣಾಮ ಎಲ್ಲರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ ಹಾಗೂ ಸೈನಿಟೈಜರ ಬಳಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರ ಜೊತೆಗೆ ಸರಕಾರ , ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೋನಾ ಹರಡದಂತೆ ತಡೆಗಟ್ಟಲು ಸಹಕರಿಸಬೇಕೆಂದು ಡಾ.ಜಗದೀಶ ಜಿಂಗಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ಸಿಪಿಐ ವೆಂಕಟೇಶ ಮುರನಾಳ , ನಾಗಪ್ಪ ಶೇಖರಗೋಳ , ಪಂಚಾಯಿತಿ ಆಡಳಿತಾಧಿಕಾರಿ ಎಂ.ಎಲ್‌ ಜನ್ಮಟ್ಟಿ , ಪಿಎಸ್ಐ ಹಾಲಪ್ಪ ಬಾಲದಂಡಿ, ಪಿಡಿಒ ಯು.ಆರ್.ಮನಗುಳಿ , ಡಾ.ಪ್ರವಿಣ ಕರಗಾವಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: