ಗೋಕಾಕ:ಸೈನಿಟೈಜರ ಸಿಂಪಡಿಸುವಂತೆ ಆಗ್ರಹಿ ಪೌರಾಯುಕ್ತರಿಗೆ ಮನವಿ
ಸೈನಿಟೈಜರ ಸಿಂಪಡಿಸುವಂತೆ ಆಗ್ರಹಿ ಪೌರಾಯುಕ್ತರಿಗೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :
ಗೋಕಾಕ್ ನಗರದ ಎಲ್ಲ ವಾರ್ಡಗಳಿಗೆ ಮತ್ತು ಕೊಣ್ಣೂರ ಪಟ್ಟಣದಾದ್ಯಂತ ಕೊರೋನಾ ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟರ್ ಸಿಂಪಡನೆ ಮಾಡುವಂತೆ ಕೋರಿ ನಗರದ ಜೈ ಹೋ ಜನತಾ ಚಾಲಕರ ಸಂಘದವರು ಪೌರಾಯುಕ್ತ ಶಿವಾನಂದ ಹಿರೇಮಠ ಅವರಿಗೆ ಮನವಿ ಅರ್ಪಿಸಿದರು
ಈ ಸಂದರ್ಭದಲ್ಲಿ ಜೈ ಹೋ ಜನತಾ ಚಾಲಕರ ಸಂಘದ ರಾಜ್ಯಾದ್ಯಕ್ಷ ಶಿವಾನಂದ ಹಿರೇಮಠ , ಸುರೇಶ ಗುಡ್ಡಾಕಾಯು, ಮಹೇಶ ಮುಂಬಡಲವರ, ಮಾರುತಿ ಮಾದರ, ವೀರಭದ್ರ ಕುಲಕರ್ಣಿ , ಫಿರೋಜ್ ಜಮಾದಾರ, ನದಾಫ ಹಾಗೂ ಸೋಮನಾಥ ಉಪಸ್ಥಿತರಿದ್ದರು