ಗೋಕಾಕ:ಹೊರಗಿನವರು ಗೋಕಾಕಕ್ಕೆ ಬರದಂತೆ ಗಡಿ ಭಾಗಗಳಲ್ಲಿ ಕಟ್ಟೆಚರ ವಹಿಸಿ : ಜಲಸಂಪನ್ಮೂಲ ಸಚಿವ ರಮೇಶ ಸೂಚನೆ
ಹೊರಗಿನವರು ಗೋಕಾಕಕ್ಕೆ ಬರದಂತೆ ಗಡಿ ಭಾಗಗಳಲ್ಲಿ ಕಟ್ಟೆಚರ ವಹಿಸಿ : ಜಲಸಂಪನ್ಮೂಲ ಸಚಿವ ರಮೇಶ ಸೂಚನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 13 :
ತಾಲೂಕಿನಲ್ಲಿ ಕೊರೋನಾ ವೈರಸ್ ಸೋಂಕಿತರು ಇಲ್ಲದಿದ್ದರು ಹೊರಗಿನವರು ಒಳಬರದಂತೆ ಗಡಿ ಭಾಗಗಳಲ್ಲಿ ಕಟ್ಟೆಚರ ವಹಿಸುವಂತೆ ಜಲಸಂಪನ್ಮೂಲ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು
ಸೋಮವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ತಾಲೂಕಾ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆ ನಡೆಯಿಸಿ ಅವರು ಮಾತನಾಡಿದರು
ಜನರಿಗೆ ಜೀವನಾವಶ್ಯಕ ವಸ್ತುಗಳ ಪೂರೈಕೆಯಲ್ಲಿ ತೊಂದರೆ ಯಾಗದಂತೆ ವ್ಯವಸ್ಥೆ ಮಾಡಿ ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧ ಪಟ್ಟ ಸಾಮಾಗ್ರಿಗಳು, ಬೀಜ ಹಾಗೂ ಗೊಬ್ಬರಗಳನ್ನು ಪೂರೈಸಿ . ಆನಾವಶ್ಯಕವಾಗಿ ಸಂಚರಿಸುವವರಿಗೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಯಾರಾದರೂ ಸಂರ್ಪಕದಲ್ಲಿದ್ದರೆ ಅಂತಹವರ ಪತ್ತೆ ಹಚ್ಚಿ ಅವರಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸವಂತೆ ತಿಳಿಸಿದರು.
ಕಳೆದ 20 ದಿನಗಳಿಂದ ಜಾರಿಯಲ್ಲಿರುವ ಲಾಕಡೌನ ಗೋಕಾಕ ನಗರದಲ್ಲಿ ಯಶಸ್ವಿಯಾಗಿದೆ ಮುಂದೆಯು ಇದು ಯಶಸ್ವಿಯಾಗಿ ಮುಕ್ತಾಯಗೋಳ್ಳಲು ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರಿಗೆ ಯಾವುದೇ ಆರೋಗ್ಯ ತೊಂದರೆ ಉದ್ಭವಿಸದಂತೆ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ನಿಗದಿತ ಸಮಯದಲ್ಲಿ ತೆರೆಯಲು ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು
ಪಡಿತರ ಅವ್ಯವಹಾರ ಆಗದಂತೆ ನಿಗಾ : ಸರಕಾರದಿಂದ ಪ್ರತಿ ಯುನಿಟಗೆ 5 ಕೆ.ಜಿ ಅಕ್ಕಿ ಮತ್ತು ಒಂದು ಕಾರ್ಡಗೆ 2 ಕೆ.ಜಿ ಗೋದಿಯಂತೆ 2 ತಿಂಗಳಗಳ ಪಡಿತರವನ್ನು ನೀಡಲಾಗುತ್ತಿದ್ದೆ ಇದು ಕಟ್ಟುನಿಟ್ಟಾಗಿ ಪಾಲನೆಯಾಗುತಿಲ್ಲ ಎಂದು ದೂರುಗಳು ಬಂದಿವೆ. ಪಡಿತದಾರರಿಗೆ ಯಾವದೇ ಅನ್ಯಾಯವಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು.
ನಗರಸಭೆ ಸದಸ್ಯರು ತಮ್ಮ ವಾರ್ಡಗಳಲ್ಲಿ ಜನರ ಸಮಸ್ಯೆಗಳಿಗೆ ಸ್ವಂದಿಸುವಂತೆ ತಿಳಿಸಿದರು . ಜೀವನಾವಶ್ಯಕ ವಸ್ತುಗಳ ವಿತರಣೆ ಸಂದರ್ಭದಲ್ಲಿ ಜನ ಜಂಗುಳಿಯಾಗದಂತೆ ಸಾಮಾಜಿಕ ಅಂತರ ಕಾಯ್ದುಕೋಳ್ಳುವಂತೆ ವ್ಯವಸ್ಥೆ ಮಾಡಬೇಕು ಮತ್ತು ಅಂಗಡಿಕಾರರು ಆದಷ್ಟು ಬೇಗ ಅಂಗಡಿ ತೆರೆದು ಜನಜಂಗುಳಿ ಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ, ಡಿ.ಎಸ್.ಪಿ ಡಿ.ಟಿ ಪ್ರಭು , ತಾ.ಪಂ ಅಧಿಕಾರಿ ಬಸವರಾಜ ಹೆಗ್ಗನಾಯಿಕ , ಆರೋಗ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ನಗರಸಭೆ ಸದಸ್ಯ ಎಸ್.ಎ.ಕೊತವಾಲ , ಅಬ್ಬಾಸ ದೇಸಾಯಿ ಸೇರಿದಂತೆ ಅನೇಕರು ಇದ್ದರು