ಗೋಕಾಕ:ವಾರ್ಡ ನಂ 29 ರಲ್ಲಿ ಮನೆ ಮನೆಗೆ ತೆರಳಿ ನಂದಿನಿ ಹಾಲು ವಿತರಣೆ
ವಾರ್ಡ ನಂ 29 ರಲ್ಲಿ ಮನೆ ಮನೆಗೆ ತೆರಳಿ ನಂದಿನಿ ಹಾಲು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 10 :
ದೇಶಾದ್ಯಂತ ಲಾಕಡೌನ ಘೋಷಣೆ ಆಗಿದ್ದರಿಂದ ಕಡು ಬಡವರು ಹಾಗೂ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ದೃಷ್ಟಿಯಿಂದ ಸರಕಾರದಿಂದ ಹಾಲು ಪೂರೈಸುವ ಯೋಜನೆ ಅನ್ವಯ ಶುಕ್ರವಾರದಂದು ನಗರದ ವಾರ್ಡ ನಂ 29 ರಲ್ಲಿ ಮನೆ ಮನೆಗೆ ತೆರಳಿ ನಂದಿನಿ ಹಾಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ, ನಗರಸಭೆ ಸಿಬ್ಬಂದಿಗಳಾದ ಸಿದ್ದಪ್ಪಾ ಬಾನಕರಿ, ಇ.ಡಿ.ಯಂಡೂರಿ ಹಾಗೂ ದಾನೇಶ ಪೂಜೇರಿ, ಯಲ್ಲಪ್ಪ ಖಾನಪ್ಪನವರ ಇದ್ದರು .