RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಪಾಪು ನಿಧನಕ್ಕೆ ರಕ್ಷಣಾ ವೇದಿಕೆ ದೂಪದಾಳ ಘಟಕ ಹಾಗೂ ಗ್ರಾಮಸ್ಥರಿಂದ ಶೃದ್ದಾಂಜಲಿ ಸಭೆ

ಘಟಪ್ರಭಾ:ಪಾಪು ನಿಧನಕ್ಕೆ ರಕ್ಷಣಾ ವೇದಿಕೆ ದೂಪದಾಳ ಘಟಕ ಹಾಗೂ ಗ್ರಾಮಸ್ಥರಿಂದ ಶೃದ್ದಾಂಜಲಿ ಸಭೆ 

ಪಾಪು ನಿಧನಕ್ಕೆ ರಕ್ಷಣಾ ವೇದಿಕೆ ದೂಪದಾಳ ಘಟಕ ಹಾಗೂ ಗ್ರಾಮಸ್ಥರಿಂದ ಶೃದ್ದಾಂಜಲಿ ಸಭೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 17 :

 

 

ಸಮೀಪದ ಧುಪದಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಮ್ಮೆಲ್ಲರನ್ನು ಅಗಲಿದ ಖ್ಯಾತ ಪತ್ರಕರ್ತರು ಗೋಕಾಕ ಚಳವಳಿಯ ಮುಂಚೂಣಿ ಹೋರಾಟಗಾರ ಗಡಿ ಕಾವಲು ಸಮಿತಿ ಅಧ್ಯಕ್ಷ ನಾಡೋಜ ಪಾಟೀಲ್ ಪುಟ್ಟಪ್ಪನವರ ಆತ್ಮಕ್ಕೆ ಶಾಂತಿ ಕೋರಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಹಾಗೂ ಗ್ರಾಮಸ್ಥರಿಂದ ಶೃದ್ದಾಂಜಲಿ ಸಭೆ ನಡೆಸಿ ಮೌನಾಚರಣೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಘಟಕ ಅಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ, ಸಂಚಾಲಕ ರವಿ ನಾವಿ, ಹಿರಿಯರಾದ ಮದಾರಸಾಬ ಜಗದಾಳ, ಸುನೀಲ್ ಕೊಟಬಾಗಿ, ಬಾಳು ದೇವರುಶಿ, ಮಹಾವೀರ ನಂದೇಶ್ವರ, ಗ್ರಾಮ ಪಂಚಾಯತಿ ಸದಸ್ಯರಾದ ಲಗಮಣ್ಣಾ ಗಾಡಿವಡ್ಡರ, ವಿಠ್ಠಲ ಗಾಡಿವಡ್ಡರ, ರಾಮಚಂದ್ರ ಪೆÇೀಳ, ಮೀರಾಸಾಬ ಬಳಿಗಾರ, ಮಲ್ಲೇಶ ಗಾಡಿವಡ್ಡರ, ದೇವೆಂದ್ರ ತಳಗೇರಿ, ಅಮೀರ ಜಗದಾಳ, ಹಾಲಪ್ಪಾ ಶೇಬನ್ನವರ, ಸೋಹೀಲ್ ಮೊಕಾಶಿ, ನಾಗರಾಜ ಮುತ್ತೆಪ್ಪಗೋಳ ಸೇರಿದಂತೆ ಕರವೇ ಕಾರ್ಯಕರ್ತರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Related posts: