ಗೋಕಾಕ :ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನಸಾಗರ
ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನಸಾಗರ
ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ ಮಕ್ಕಳಗೇರಿ ಘಟಕ ,ಅರಣ್ಯ ಇಲಾಖೆ, ಗ್ರಾ.ಮ ಪಂಚಾಯತಿ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಶಿಲ್ತಿಭಾಂವಿ ಗ್ರಾಮದ ಶಾಲಾ ಆವರಣದಲ್ಲಿ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು
ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಎಸ್.ಯದವನ್ನವರ, ಪಿ.ಎಸ್. ಅಜ್ಜನ್ನವರ, ಆರ್.ಆರ್.ಹೂಗಾರ ಎನ್.ಬಿ.ತೋರಣಗಟ್ಟಿ ಶ್ರೀ ಮತಿ ಕೆ.ಆರ್.ಮುನ್ಯಾಳಗೋಳ, ಜಿ.ಯು.ನಂದಿ ಶ್ರೀಮತಿ ಆರ್.ಕೆ. ಪತ್ತಾರ, ಬಿ.ಎಸ್.ನಂದಿ ಸಿ.ಎಚ್.ಹರಿಜನ ಹಾಗೂ ಅರಣ್ಯ ಇಲಾಖೆಯ ಸಿಬಂದ್ದಿಯಾದ ಕಿರಣ ಕ್ಷೀರಸಾಗರ, ಅರ್ಜುನ ಹುಡೇದ ಮತ್ತು ಕರವೇ ಮಕ್ಕಳಗೇರಿ ಗ್ರಾಮ ಘಟಕ ಅಧ್ಯಕ್ಷರಾದ ಹನೀಫ ಸನದಿ ಹಾಗೂ ಪದಾಧೀಕಾರಿಗಳಾದ ಕಾಶೀಮ ಸನದಿ ಮಲಿಕ ಸನದಿ, ಪ್ರಕಾಶ ವಂಟಗುಡಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.