ಗೋಕಾಕ:ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು
ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 21 :
ಜಾತ್ಯಾತೀತ, ಧರ್ಮಾತೀತ ಹಾಗೂ ಮತಾತೀತ ಸಮಾಜ ನಿರ್ಮಾಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಅಪಾರವಾಗಿತ್ತು ಎಂದು ಪ್ರೋ ಸಂಗಮೇಶ ಸಣ್ಣತಂಗಿ ಹೇಳಿದರು.
ಅವರು, ಮಂಗಳವಾರದಂದು ನಗರದ ತಾಪಂ ಸಭಾಗೃಹದಲ್ಲಿ ತಾಲೂಕಾಡಳಿತ ಹಾಗೂ ಗಂಗಾಮತಸ್ಥ ಸಮಾಜದ ಆಶ್ರಯದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿಶ್ವ ಮಾನವರಾಗಿರುವ ಅಂಬಿಗರ ಚೌಡಯ್ಯನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಇವರು ಬಿಟ್ಟುಹೋದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಪರಿಪಾಲನೆ ಮಾಡಿಕೊಂಡು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ಬದುಕುವಂತೆ ಅವರು ಹೇಳಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ವೇದಿಕೆಯ ಮೇಲೆ ಜಂಗಟಿಹಾಳದ ಶ್ರೀ ಚಂದ್ರಶೇಖರ ಮಹಾರಾಜರು, ನಗರಸಭೆ ಸದಸ್ಯ ಎಸ್ ಎ ಕೋತವಾಲ, ತಹಶೀಲ್ದಾರ ಕುಲಕರ್ಣಿ, ಸಮಾಜ ಮುಖಂಡರಾದ ಲಕ್ಷ್ಮಣ ಪಾಶ್ಚಾಪೂರ, ಗುರುನಾಥ ಕೋಳಿ, ಸಂತೋಷ ತಡಸಲ, ಸುಭಾಸ ಘಡಕರಿ, ರಾಜು ಹಿರೇಅಂಬಿಗೇರ ಸೇರಿದಂತೆ ಅನೇಕರು ಇದ್ದರು.