ಗೋಕಾಕ:ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ
ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :
ವಿದ್ಯಾರ್ಥಿಗಳಿಗೆ ಒಳ್ಳೇಯ ಮಾರ್ಗದರ್ಶನ ಗುರುವಿನಿಂದ ದೊರೆತರೆ ಯಶಸ್ಸು ಸಾಧಿಸುವುದು ಸುಲಭ, ಹುಟ್ಟಿನಿಂದ ಯಾರೂ ಬುದ್ಧಿವಂತರಲ್ಲ. ಆತ್ಮಬಲ ದೃಢ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ಘಟನೆಗಳೇ ನಮಗೆ ಒಡೆಯ ಎಂದು ಗೋಕಾಕ ಪೊಲಿಸ ಅಧೀಕ್ಷರಾದ ಪ್ರಭು ಡಿ.ಟಿ ಹೇಳಿದರು.
ಅವರು ನಗರದ ಜ್ಞಾನದೀಪ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಜೀವನ ಅಮೂಲ್ಯವಾದುದು. ರಸ್ತೆ ನಿಮ್ಮದೆಂದು ವಾಹನ ಚಲಿಸದೆ ವಾಹನ ನಿಮ್ಮದೆಂದು ಅರಿತು ವಾಹನ ಚಲಿಸುವದನ್ನು ಅರಿತುಕೊಳ್ಳಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಘೋಡಗೇರಿಯ ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮಿಜಿ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ್ಲಿ ಲೌಕಿಕ ಸುಖಕ್ಕೆ ಒಳಗಾದರೆ ಭವಿಷ್ಯದಲ್ಲಿ ಅಪಾರ ದು:ಖವನ್ನು ಅನುಭವಿಸಬೇಕಾಗುತ್ತದೆ. ಈಗ ಕಷ್ಟ ಪಟ್ಟರೆ ಮುಂದೆ ಸುಖವುಂಟು,ಸಂಸ್ಕಾರವಂತರಾಗಿ ಬಾಳಲು ಸಾಧ್ಯ ಎಂದರು.
ವಿ.ಎ.ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ: ಉದಯ ಆಜರಿ, ಜೆ.ಎಚ್.ಪಾಟೀಲ, ಭರಬರಿ ಸೇರಿದಂತೆ ಇತರರು ಇದ್ದರು. ವಿದ್ಯಾರ್ಥಿಗಳಾದ ಶಾರದಾ ಪತ್ತಾರ, ಪ್ರೀತಿ ಚಿಮ್ಮಡ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜಯಶ್ರೀ ಕರಿಗಾರ ವಾರ್ಷಿಕ ವರದಿ ವಾಚಿಸಿದರು. ಪ್ರೋ: ಜಿ.ವಿ.ಮಳಗಿ ಸ್ವಾಗತಿಸಿದರು. ತೇಜಸ್ ರೇಂದಾಳೆ ಹಾಜರಾ ದೇಸಾಯಿ ನಿರೂಪಿಸಿದರು. ಪುರುಷೋತ್ತಮ ಜಕಬಾಳ ವಂದಿಸಿದರು.