RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ದಣಿವರಿಯದ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಭಾರಿ ಜನ ಬೆಂಬಲ

ಗೋಕಾಕ:ದಣಿವರಿಯದ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಭಾರಿ ಜನ ಬೆಂಬಲ 

ದಣಿವರಿಯದ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಭಾರಿ ಜನ ಬೆಂಬಲ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 22 :

 

 

ಕಳೆದ ಎರೆಡು ದಿನಗಳಿಂದ ದಣಿವರಿಯದ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಶುಕ್ರವಾರದಂದು ಬೆಳ್ಳಂಬೆಳಗ್ಗೆ ಗೋಕಾಕ ಮತಕ್ಷೇತ್ರದ ಪಾರನಟ್ಟಿ , ಮಕ್ಕಳಗೇರಿ, ಪುಡಲಕಟ್ಟಿ ,ಶಿಲ್ತಿಬಾವಿ , ಜಮನಾಳ, ಹಿರೇಹಟ್ಟಿ , ಹೀರೆನಂದಿ, ಚಿಕ್ಕನಂದಿ , ಪಂಚನಾಯ್ಕನಹಟ್ಟಿ ಹಾಗೂ ದುಂಡಾನಟ್ಟಿ ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡು ಪ್ರಚಾರ ನಡೆಸಿದರು

ಪ್ರತಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಹೆಣ್ಣು ಮಕ್ಕಳು ಆರತಿ ಬೆಳಗಿ ಸ್ವಾಗತ ಕೋರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು

ಗ್ರಾಮಗಳ ಹಿರಿಯರು, ಮುಖಂಡರುಗಳು ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಿ, ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಬ್ಲಾಕ್ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ಮುಖಂಡರಾದ ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಸಿದ್ದಪ್ಪ ಗೋಡಿ, ಮುತ್ತೆಪ್ಪ ಖಿಲಾರಿ, ಲಕ್ಷ್ಮಣ ಖಿಲಾರಿ, ಹಣಮಂತಗೌಡ ಪಾಟೀಲ, ಸಿದ್ದಪ್ಪ ರಂಗಣ್ಣನವರ, ಕ್ರಿಷ್ಣಾ ದಾಸಂತರ, ಪರಸಪ್ಪ ಖಿಲಾರಿ, ಲಕ್ಷ್ಮಣ ಜಿಂಗಿ ಸೇರಿದಂತೆ ಪಾರನಟ್ಟಿ ಗ್ರಾಮಸ್ಥರು ಇತರರು ಇದ್ದರು.

Related posts: