ಗೋಕಾಕ:ವರಕವಿ ದ.ರಾ.ಬೇಂದ್ರೆ ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ : ಪುಷ್ಪಾ ಮುರಗೋಡ
ವರಕವಿ ದ.ರಾ.ಬೇಂದ್ರೆ ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ : ಪುಷ್ಪಾ ಮುರಗೋಡ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 6 :
ರಸವೇ ಜನನ. ವಿರಸವೇ ಮರಣ, ಸಮರಸವೇ ಜೀವನ ಎಂದು ಬದುಕನ್ನು ಕಟ್ಟಿಕೊಂಡು ನಾಕುತಂತಿ ಎಂಬ ಮಹಾನ ಕಾವ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ವರಕವಿ ದ.ರಾ.ಬೇಂದ್ರೆ ಅವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಭಾವಯಾನ ಮಹಿಳಾ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಗೌರವಾಧ್ಯಕ್ಷೆ ಪುಷ್ಪಾ ಮುರಗೋಡ ಹೇಳಿದರು.
ರವಿವಾರದಂದು ನಗರದ ಡಾ.ಮದಭಾಂವಿ ಅವರ ಸಭಾಗೃಹದಲ್ಲಿ ಭಾವಯಾನ ಮಹಿಳಾ ಸಾಹಿತ್ಯ ಸಾಂಸ್ಕøತಿಕ ವೇದಿಕೆಯವರು ಹಮ್ಮಿಕೊಂಡ ಚಿಂತನಗೋಷ್ಠಿಯಲ್ಲಿ ವರಕವಿ ಬೇಂದ್ರೆಯವರ ಕುರಿತು ಮಾತನಾಡುತ್ತಾ, ಅಂಬಿಕಾತನಯದತ್ತ ಕಾವ್ಯನಾಮದಲ್ಲಿ ಬೇಂದ್ರೆಯವರು 35 ಕವನ ಸಂಕಲನ, 14 ನಾಟಕ, 9 ವಿಮರ್ಶಾ ಕೃತಿ 5 ಮರಾಠಿ ಕೃತಿಗಳು, 7 ಅನುವಾದಿತ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ವೇದಿಕೆ ಮೇಲೆ ಭಾರತಿ ಮದಭಾಂವಿ, ಮಹಾನಂದಾ ಪಾಟೀಲ, ಶಕುಂತಲಾ ಅಂಗಡಿ, ವಸಂತ ಕುಲಕರ್ಣಿ ಇದ್ದರು. ಡಾ. ರೇಖಾ ಹಳೆಮನಿ ಸ್ವಾಗತಿಸಿದರು, ಶಕುಂತಲಾ ಹಿರೇಮಠ ನಿರೂಪಿಸಿದರು. ವಿನೂತಾ ನಾವಲಗಿ ವಂದಿಸಿದರು.