RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ರಾಷ್ಟ್ರದ ಏಳ್ಗೆಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಅತ್ಯಮೂಲ್ಯವಾಗಿತ್ತು : ಶೇಖರಗೋಳ

ಗೋಕಾಕ:ರಾಷ್ಟ್ರದ ಏಳ್ಗೆಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಅತ್ಯಮೂಲ್ಯವಾಗಿತ್ತು : ಶೇಖರಗೋಳ 

ರಾಷ್ಟ್ರದ ಏಳ್ಗೆಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಅತ್ಯಮೂಲ್ಯವಾಗಿತ್ತು : ಶೇಖರಗೋಳ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 25 :

 

ರಾಷ್ಟ್ರದ ಏಳ್ಗೆಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಅತ್ಯಮೂಲ್ಯವಾಗಿತ್ತು ಎಂದು ಯುವ ಮುಖಂಡ ನಾಗೇಶ್ ಶೇಖರಗೋಳ ಹೇಳಿದರು.
ಬುಧವಾರದಂದು ನಗರದ ಎನ್.ಎಸ್.ಎಫ್. ಅತಿಥಿ ಗೃಹ ದಲ್ಲಿ ಅರಭಾವಿ ಬಿಜೆಪಿ ಮಂಡಲ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರದ ಅಭ್ಯುದಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿರುವ ಅಟಲ್ ಜೀ ಅವರ ದೇಶ ಪ್ರೇಮವನ್ನು ಕೊಂಡಾಡಿದರು.
ಭಾರತ ವಿಶ್ವ ಮಟ್ಟದಲ್ಲಿ ಗುರುತಿಸಲು ಸಾಕಷ್ಟು ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಂಡು ಇಡೀ ವಿಶ್ವವೇ ನಮ್ಮತ್ತ ಬೆರಗಾಗುವಂತೆ ಮಾಡಿದರು. ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ಗಳಿಸಿದರು. ಯಾರನ್ನೂ ವಿರೋಧ ಕಟ್ಟಿಕೊಳ್ಳಲಿಲ್ಲ. ಇದರಿಂದಾಗಿ ಯೇ ಅವರು ಅಜಾತಶತ್ರು ಎಂದು ಕರೆಸಿಕೊಂಡರು. ಇವರ ಪರಿಶ್ರಮದಿಂದ ಬಿಜೆಪಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವಿಶ್ವದ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಬೆಳವಣಿಗೆಯಲ್ಲಿ ವಾಜಪೇಯಿ ಅವರ ತ್ಯಾಗವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Related posts: