ಗೋಕಾಕ:ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧ : ಎಚ್. ಹನುಮಂತಪ್ಪ
ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧ : ಎಚ್. ಹನುಮಂತಪ್ಪ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 21 :
ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲಿಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಬಳ್ಳಾರಿ ಹೇಳಿದರು
ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಇಲ್ಲಿನ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು
ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟು ಈ ಅಧಿಕಾರವನ್ನು ನೀಡಿದ್ದಾರೆ. ಇದು ನನ್ನ ಜವಾಬ್ದಾರಿ ಎಂದು ಭಾವಿಸಿ ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರ ಬದ್ದವಾಗಿದ್ದು, ಕರ್ಮಚಾರಿ ಅಭಿವೃದ್ಧಿ ನಿಗಮದಡಿಯಲ್ಲಿ ಸ್ವಯಂ ಉದ್ಯೋಗ ಯೋಜನೆ (ಐ.ಎಸ್.ಬಿ.) ಅಡಿಯಲ್ಲಿ ಸಮೃದ್ಧಿ ,ಉನ್ನತಿ ಐರಾವತ , ಪ್ರೇರಣಾ,ಸ್ಪೂರ್ತಿ, ಪ್ರಬುದ್ಧ , ಗಂಗಾ ಕಲ್ಯಾಣ,ಭೂ ಒಡೆತನ, ಪ್ರಗತಿ ಸೇರಿದಂತೆ ಹತ್ತಾರು ಯೋಜನೆಗಳನ್ನು ನೀಡಿದೆ ಸಮಾಜ ಬಾಂಧವರು ಸರಕಾರ ನೀಡುವ ಸಹಾಯ ಸವಲತ್ತುಗಳನ್ನು ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು
ಸಭೆಯ ಅಧ್ಯಕ್ಷತೆಯನ್ನು ಮಾದಿಗ ಹೋರಾಟ ಸಮಿತಿಯ ತಾಲೂಕಾಧ್ಯಕ್ಷ ಬಸವರಾಜ ಕಾಡಾಪೂರ ವಹಿಸಿದ್ದರು
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಅರೆನ್ನವರ , ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚನನ್ನವರ, ದಲಿತ ಸಂಘಟನೆಗಳ ಮುಖಂರುಗಳಾದ ರಮೇಶ ಮಾದರ, ಕಾಡಪ್ಪ ಮೇಸ್ತ್ರಿ , ಅಶೋಕ ಲಗಪ್ಪಗೋಳ, ಬಾಳೆಶ ಸಂತವ್ವಗೋಳ , ಶಾಂತಪ್ಪ ಮೇತ್ರಿ , ಅಶೋಕ ಉದ್ದಪ್ಪನವರ , ಬಸು ಮೇಸ್ತ್ರಿ, ರಾಜೇಂದ್ರ ಐಹೊಳೆ ಮಹಾವೀರ ಐಹೊಳೆ, ವಿರಬದ್ರ ಮೈಲನ್ನವರ , ಮಾರುತಿ ಹರಿಜನ, ಪ್ರಕಾಶ ಮೇತ್ರಿ, ಶಿವಾಜಿ ದೊಡ್ಡಮನಿ ಸೇರಿದಂತೆ ಇತರರು ಇದ್ದರು .