ಗೋಕಾಕ:ಗೋಕಾಕ ಕ್ಷೇತ್ರದ ಅಲ್ಪಸಂಖ್ಯಾತರಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ : ರಹೀಮ ಉಚ್ಚಿಲ್

ಗೋಕಾಕ ಕ್ಷೇತ್ರದ ಅಲ್ಪಸಂಖ್ಯಾತರಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ : ರಹೀಮ ಉಚ್ಚಿಲ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 23 :
ಗೋಕಾಕ ಕ್ಷೇತ್ರದ ಅಲ್ಪಸಂಖ್ಯಾತರಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಮ ಉಚ್ಚಿಲ್ ಹೇಳಿದರು
ಶನಿವಾರದಂದು ನಗರದ ಖಾಸಗಿ ಹೊಟೇಲನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
ಭಾರತೀಯ ಜನತಾ ಪಾರ್ಟಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆ ಅಲ್ಪಸಂಖ್ಯಾತ ಸಮುದಾಯದವರಲ್ಲಿ ನೆಲೆ ಉರಿದೆ ಆದರೆ ರಮೇಶ ಜಾರಕಿಹೊಳಿ ಅವರು ಸ್ವರ್ಧಿಸಿದ ನಂತರ ಮುಸ್ಲಿಂ ಸಮುದಾಯದವರು ಬಹಳಷ್ಟು ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ . ಕರ್ನಾಟಕ ದಲ್ಲಿ ಬಿಜೆಪಿ ಪಕ್ಷ ಯಾವುದೇ ಒಂದು ಜಾತಿ, ಧರ್ಮದ ಪಕ್ಷ ಅಲ್ಲ ಎಲ್ಲರ ಏಳ್ಗೆಗೆ ಶ್ರಮಿಸು ಪಕ್ಷ ಎಂದ ಅವರು
ಬಿಜೆಪಿಯನ್ನು ಕೋಮವಾದಿ ಪಕ್ಷ ,ಮುಸ್ಲಿಂ ವಿರೋಧಿ ಪಕ್ಷ ಎಂದು ಬಿಂಬಿಸಲಾಗುತ್ತಿದೆ ಆದರೆ ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಕೋಮುಗಲಭೆ ಸಂಭವಿಸಿಲ್ಲ ಬಿಜೆಪಿ ಸರಕಾರದ ಎಲ್ಲ ಯೋಜನೆಗಳು ಜನ ಪರವಾಗಿವೆ. ಧರ್ಮದ ಆಧಾರದ ಮೇಲೆ ಯೋಜನೆಗಳನ್ನು ನೀಡುವ ಕಾರ್ಯ ಕಾಂಗ್ರೆಸ್ ಪಕ್ಷ ಮಾಡಿದೆ ಆದರೆ ಬಿಜೆಪಿ ಯಾವುದೇ ಧರ್ಮಕ್ಕೆ ಸೀಮಿತ ವಾಗಿರದೆ ಎಲ್ಲ ಯೋಜನೆಗಳನ್ನು ಎಲ್ಲ ಸಮುದಾಯದ ಜನರಿಗೆ ಮಾಡಿದೆ . ಬಿಜೆಪಿಯನ್ನು ಗೆಲ್ಲಿಸದ ಮುಸ್ಲಿಂ ಸಮುದಾಯ ಅಭಿವೃದ್ಧಿಗೆ ಕ್ಕೆ 500 ಕೋಟಿ ಅನುದಾನ ನೀಡಿದೆ ಅಲ್ಲದೆ ಹಜ್ ಹೌಸಗೆ 5 ಎಕ್ಕರೆ ಭೂಮಿ ನೀಡಿದ್ದಾರೆ. ಇದು ನಮ್ಮ ಪಕ್ಷದ ಸಾಧನೆಯಾಗಿದೆ.
ಕರ್ನಾಟಕದ ಪ್ರತಿಯೊಬ್ಬ ಮುಸ್ಲಿಂ ಸಮಾಜದವರು ಕಾಂಗ್ರೆಸಗೆ ಮತಹಾಕಿದ್ದರೂ ಸಹ ಕಾಂಗ್ರೆಸ್ ಮುಸ್ಲಿಂ ಸಮಾಜವನ್ನು ಅಭಿವೃದ್ಧಿ ಮಾಡಿಲ್ಲ , ಆದರೆ ಬಿಜೆಪಿ ಪಕ್ಷ ಅವರು ಮಾಡಿದ್ದಾರೆ ಇದನ್ನು ಮನವರಿಕೆ ಮಾಡುವ ಕಾರ್ಯ ಪಕ್ಷದ ಕಾರ್ಯಕರ್ತರು ಮಾಡಬೇಕು
ಪಠ್ಯದಲ್ಲಿ ಟೀಪ್ಪು ಸುಲ್ತಾನ್ ಪಾಠ ತೆಗೆದು ಹಾಕಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಟೀಪ್ಪು ಸುಲ್ತಾನರ ಬಗ್ಗೆ ಪರ ಮತ್ತು ವಿರೋಧ ವಿಚಾರಗಳು ಪ್ರಚಲಿತ ವಿರುವಾಗ ಅದರ ಬಗ್ಗೆ ಸ್ವಷ್ಠವಾದ ನಿಲುವು ಬಂದ ನಂತರ ಆ ವಿಚಾರವಾಗಿ ಸರಕಾರ ಕಾರ್ಯ ಪ್ರವೃತವಾಗಲಿದೆ ಎಂದು ಸ್ವಷ್ಠಪಡಿಸಿದ್ದರಲ್ಲದೆ ಟೀಪ್ಪು ಜಯಂತಿಯನ್ನು ಮಾಡಲು ಯಾರು ಮೌಲಾನಗಳನ್ನು ಅರ್ಜಿ ಹಾಕಿಲ್ಲ ಇದು ಸಿದ್ದರಾಮಯ್ಯ ಮಾಡಿದ ತಂತ್ರ ಮುಸ್ಲಿಂ ಸಮಾಜದಲ್ಲಿ ಪೈಗಂಬರ ಜಯಂತಿ ಒಂದನ್ನು ಬಿಟ್ಟು ಬೇರೆ ಯಾರ ಜಯಂತಿಗಳನ್ನು ಆಚರಿಸುವ ಉಲ್ಲೇಖವಿಲ್ಲ ಆದರೂ ಸಹ ಕಾಂಗ್ರೆಸ್ ಇದನ್ನು ಮಾಡಿ
ಗೊಂದಲಗಳನ್ನು ಸೃಷ್ಟಿಸಿದೆ ಎಂದು ರಹೀಮ ಉಚ್ಚಲ್ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶಕೀಲ ಧಾರವಾಡಕರ ಸೇರಿದಂತೆ ಇತರರು ಇದ್ದರು