ಗೋಕಾಕ:ನಿರ್ಜೀವಗೊಂಡ ಅಂಚೆಜೀವ ವಿಮೆಪಾಲಸಿದಾರರ ಗಮನಕ್ಕೆ

ನಿರ್ಜೀವಗೊಂಡ ಅಂಚೆಜೀವ ವಿಮೆಪಾಲಸಿದಾರರ ಗಮನಕ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ, 10 ;-
ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿದಾರರು ಸತತವಾಗಿ ೫ ವರ್ಷಗಳ ಕಾಲ ಪ್ರೀಮಿಯಂ ಪಾವತಿಸದೇ ನಿಂತು ಹೋಗಿರುವ ಹಾಗೂ ನಿರ್ಜೀವಗೊಂಡಿರುವ ಪಾಲಿಸಿಗಳನ್ನು ದಿ. ೧/೧/೨೦೨೦ ರ ನಂತರ ಪುನರುಜ್ಜೀವನಗೊಳಿಸಲಾಗುವುದಿಲ್ಲ. ೫ ವರ್ಷಗಳು ಮೀರಿದ ಪಾಲಿಸಿಗಳನ್ನು ದಿ. ೩೧/೧೨/೨೦೧೯ ರೊಳಗಾಗಿ ಉತ್ತಮ ಆರೋಗ್ಯದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಹತ್ತಿರದ ಅಂಚೆ ಕಚೇರಿಯಲ್ಲಿ ಸಲ್ಲಿಸಿ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಿಕೊಳ್ಳುವಂತೆ ಗೋಕಾಕ ವಿಭಾಗದ ಅಂಚೆ ಅಧೀಕ್ಷಕ ಎಮ್.ಆರ್.ಕಾಮಗೌಡರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
