ಗೋಕಾಕ:ಕೌಜಲಗಿ ಅರ್ಬನ್ ಬ್ಯಾಂಕಿಗೆ ರೂ.6.62 ಲಕ್ಷ ಲಾಭ

ಕೌಜಲಗಿ ಅರ್ಬನ್ ಬ್ಯಾಂಕಿಗೆ ರೂ.6.62 ಲಕ್ಷ ಲಾಭ
ನಮ್ಮ ಬೆಳಗಾವಿ ಇ – ವಾರ್ತೆ ,ಕೌಜಲಗಿ ಸೆ 24 :
ಕೌಜಲಗಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ 2018-19 ನೇ ಸಾಲಿನಲ್ಲಿ ರೂ.1129.56 ಲಕ್ಷ ವಹಿವಾಟು ನಡೆಸಿ, ರೂ.6,62,173.78 ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಪಟ್ಟಣದ ಬಸವೇಶ್ವರ ಪೇಟೆಯಲ್ಲಿರುವ ಬ್ಯಾಂಕಿನ ಸಭಾಭವನದಲ್ಲಿ ನಡೆದ 73ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದುವರೆಗೆ ಬ್ಯಾಂಕು ಸಿ ದರ್ಜೆಯಲ್ಲಿತ್ತು. ಈ ವರ್ಷ ಬಿ ಮೇಲ್ದರ್ಜೆಗೇರಿದ್ದು, ಒಟ್ಟು ಲಾಭಾಂಶದಲ್ಲಿ 6% ರಷ್ಟು ಹಣವನ್ನು ಶೇರುದಾರರಿಗೆ ಅಕ್ಟೋಬರ್ 1 ರಿಂದ ನೀಡಲಾಗುವದು. ಬ್ಯಾಂಕಿಗೆ 73 ವರ್ಷಗಳು ಸಂದಿರುವ ಪ್ರಯುಕ್ತ, ಯಾದವಾಡ, ಢವಳೇಶ್ವರ ಹಾಗೂ ಉದಗಟ್ಟಿ ಕ್ರಾಸ್ನಲ್ಲಿ ನೂತನವಾಗಿ 3 ಶಾಖೆಗಳನ್ನು ಆರಂಭಿಸಲಾಗುತ್ತದೆ. ಬ್ಯಾಂಕಿನ ಲಾಭಾಂಶದಲ್ಲಿ ಮುಂದಿನ ವರ್ಷದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಸಿದ ಸಾಧಕರಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದವರನ್ನು ಸನ್ಮಾನಿಸಲಾಗುವದು ಹಾಗೂ ಬ್ಯಾಂಕಿನೊಂದಿಗೆ ಉತ್ತಮ ವ್ಯವಹಾರ ನಡೆಸಿದ ಅತ್ಯುತ್ತಮ ಗ್ರಾಹಕ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆಂದು ಸಣ್ಣಕ್ಕಿ ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಬಹುಮಾನ ವಿತ ರಿಸಿದರು. ವ್ಯವಸ್ಥಾಪಕ ಪಿ.ಪಿ.ಗೌಡರ (ಪಾಟೀಲ) ಬ್ಯಾಂಕಿನ ಸವಲತ್ತುಗಳನ್ನು ಸಭೆಯಲ್ಲಿ ವಿವರಿಸಿದರು. ಸಹವ್ಯವಸ್ಥಾಪಕ ಅರುಣ ಪೇಟೆ ಖರ್ಚು-ವೆಚ್ಚದ ಮಾಹಿತಿ ನೀಡಿದರು. ಮುಖಂಡರಾದ ಮಹಾದೇವಪ್ಪ ಭೋವಿ, ನಿರ್ದೇಶಕರುಗಳಾದ ಅಶೋಕ ಪರುಶೆಟ್ಟಿ, ಶಿವಾನಂದ ಲೋಕನ್ನವರ, ಶ್ರೀಶೈಲ ಗಾಣಿಗೇರ, ಸುಭಾಸ ಕೌಜಲಗಿ, ಅಡಿವೆಪ್ಪ ದಳವಾಯಿ, ಅಶೋಕ ಹೊಸಮನಿ, ಹಬೀಬ ಮುಲ್ತಾನಿ, ಭೀಮಶಿ ಉದ್ದಪ್ಪನವರ, ಈರಣ್ಣ ಹುದ್ದಾರ, ಎಮ್.ಆಯ್.ನೀಲನ್ನವರ, ನಾರಾಯಣ ಕೌಜಲಗಿ, ಮಹಾಂತಪ್ಪ ಶಿವನಮಾರಿ, ಜಕೀರಸಾಬ ಜಮಾದಾರ, ಅಶೋಕ ಶೀವಾಪೂರ, ನೀಲಪ್ಪ ಕೇವಟಿ, ರಾಯುಪ್ಪ ಬಳೋಲದಾರ, ಅಶೋಕ ಉದ್ದಪ್ಪನವರ, ಶಾಂತಪ್ಪ ಹಿರೇಮೇತ್ರಿ, ಡಾ. ರಾಜು ಕಂಬಾರ, ಶ್ರೀಕಾಂತ ವಿರಕ್ತಮಠ, ಮಂಜುನಾಥ ಸಣ್ಣಕ್ಕಿ, ಬ್ಯಾಂಕಿನ ಸಿಬ್ಬಂದಿ ವರ್ಗ, ಶೇರುದಾರರು ಉಪಸ್ಥಿತರಿದ್ದರು. ಅಶೋಕ ಜಗದಾಳೆ ನಿರೂಪಿಸಿದರು. ಅಣ್ಣಪ್ಪ ನಾಡಗೌಡರ ವಂದಿಸಿದರು.