ಗೋಕಾಕ :ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು : ಪೂರ್ವಭಾವಿ ಸಭೆಯಲ್ಲಿ ಮುರುಘರಾಜೇಂದ್ರ ಶ್ರೀಗಳ ಸಲಹೆ
ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು : ಪೂರ್ವಭಾವಿ ಸಭೆಯಲ್ಲಿ ಮುರುಘರಾಜೇಂದ್ರ ಶ್ರೀಗಳ ಸಲಹೆ
ಗೋಕಾಕ : ಜು 21: ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ಶೂನ್ಯ ಸಂಪಾದನಮಠದ ಮ.ನಿ.ಪ್ರ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕ ಘಟಕ, ವಿಜಯಕರ್ನಾಟ ದಿನಪತ್ರಿಕೆ, ಗೋಕಾಕ ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘ, ಬಾಡಿಬಿಲ್ಡರ್ಸ್ ಅಶೋಸಿಯೇಶನ್, ವೃತ್ತಿ ನಿರತ ಛಾಯಾಗ್ರಾಹಕರ ಸಂಘ, ಮನಸಾಕ್ಷಿ ಫೌಂಡೇಷನ್, ಸಿರಿಗನ್ನಡ ವೇದಿಕೆ, ಜೆ.ಸಿ.ಬಿ ಸಂಸ್ಥೆ ಇವುಗಳ ನೇತೃತ್ವದಲ್ಲಿ ತಾಲೂಕಾಡಳಿತ, ಅರಣ್ಯ ಇಲಾಖೆ, ನಗರಸಭೆ, ಸಾ.ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪಶುಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ತಾಲೂಕಿನ ಇನ್ನೀತರ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಶೂನ್ಯ ಸಂಪಾದನಮಠದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ರಾಜ್ಯ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಅದನ್ನು ಮನಗಂಡು ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ಗಿಡಗಳನ್ನು ನೆಡುವ ಕಾರ್ಯಮಾಡಬೇಕಾಗಿದೆ. ಆದ್ದರಿಂದ ಕ.ರ.ವೇ ನೇತೃತ್ವದಲ್ಲಿ ತಾಲೂಕಿನ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ತಾಲೂಕಿನಾದ್ಯಂತ ಬರುವ ಅಗಸ್ಟ 13 ರಂದು ಒಂದೇ ದಿನ 25ಸಾವಿರ ಗಿಡಗಳನ್ನು ನೆಡುವ ಬೃಹತ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದಿನ ಗೋಕಾಕ ನಗರ ಸೇರಿದಂತೆ ತಾಲೂಕಿನಾದ್ಯಂತ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸಂಯಮ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಕಾಪಾಡಬೇಕೆಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪಾಲ್ಗೊಂಡ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ, ಕ.ರ.ವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಸಾಹಿತಿ ಡಾ. ಸಿ.ಕೆ. ನಾವಲಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ. ಬಳಿಗಾರ, ವಲಯ ಅರಣ್ಯ ಅಧಿಕಾರಿಗಳಾದ ಎಂ.ಕೆ. ಪಾತ್ರೋಟ, ಸಂಕ್ರಿ, ನಿವೃತ್ತ ಅಧಿಕಾರಿ ಎಸ್.ಸಿ. ಪಾಟೀಲ, ಬಾಡಿಬಿಲ್ಡರ್ಸ್ ಸಂಘಟನೆಯ ರಮೇಶ ಕಳ್ಳಿಮನಿ, ಸಿರಿಗನ್ನಡ ವೇದಿಕೆಯ ಶ್ರೀಮತಿ ರಜನಿ ಜೀರಗ್ಯಾಳ, ಈಶ್ವರ ಮಮದಾಪೂರ, ಹಿರಿಯ ಪತ್ರಕರ್ತ ಬಾಳಯ್ಯ ಕಂಬಿ, ಮಾತನಾಡಿ ಕಾರ್ಯಕ್ರಮದ ಕುರಿತು ಸಲಹೆ ಸೂಚನೆಗಳನ್ನು ನೀಡಿ ಅಗಸ್ಟ 13ರಂದು ನಡೆಯುವ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಗೋಕಾಕ ತಾಲೂಕವನ್ನು ಹಸಿರುಮಯ ಮಾಡೋಣ ಎಂದು ಹೇಳಿದರು.
ಸಭೆಯಲ್ಲಿ ಹುಣಶ್ಯಾಳಿನ ಪ.ಪೂ.ಶ್ರೀ ನಿಜಗುಣದೇವರು, ಸುಣಧೋಳಿ ಪ.ಪೂ.ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಮುನ್ಯಾಳಿನ ಪ.ಪೂ ಶ್ರೀ ಶಿವಯೋಗಿ ಮುರುಘ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಕ.ರ.ವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಪಶುಇಲಾಖೆ ಉಪನಿರ್ದೇಶಕ ಡಾ|| ಮೋಹನ ಕಮತ, ಡಾ|| ಆರ್.ಎಸ್. ಬೆಣಚಿನಮರಡಿ, ಸತೀಶ ಮುಂಗರವಾಡಿ, ಎಸ್.ಪಿ. ವರಾಳೆ, ಶಿವಕುಮಾರ ದೇವರಾಜ, ಪಿ.ಎಸ್.ಐ. ಜಾನಾರ, ಎ.ಪಿ.ಎಂ.ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಛಾಯಾಗ್ರಾಹಕ ಸಂಘದ ಅಧ್ಯಕ್ಷ ರವಿ ಉಪ್ಪಿನ, ಬಾಡಿಬಿಲ್ಡರ್ಸ್ ಸಂಘಟನೆ ಅಧ್ಯಕ್ಷ ಸಂಜೀವ ದೇವರಮನಿ, ಎಮ್.ಎಲ್. ಜನ್ಮಟ್ಟಿ, ನದಾಫ, ಜೆ.ಸಿ.ಆಯ್ನ ಕೆಂಪಣ್ಣಾ ಚಿಂಚಲಿ, ಗುರುರಾಜ ನಿಡೋಣಿ, ಲಕ್ಷ್ಮಣ ಯಮಕನಮರಡಿ, ಮಲ್ಲಿಕಾರ್ಜುನ ಕೆ.ಆರ್., ಹಣಮಂತ ಇಂಗಳಗಿ, ದೀಪಕ ಹಂಜಿ, ಹನೀಫಸಾಬ ಸನದಿ, ರಮೇಶ ಕಮತಿ, ಮಹಾದೇವ ಮಕ್ಕಳಗೇರಿ ಸೇರಿದಂತೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.