ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಪಥದತ್ತ ಸಾಗುತ್ತಿದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಪಥದತ್ತ ಸಾಗುತ್ತಿದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 4 :
ಶ್ರೀ ದುರದುಂಡೇಶ್ವರರ ಆರ್ಶಿವಾದದಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಅರಭಾವಿ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು
ಬುಧವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ 41 ನೇ ಬಾಯಲರ್ ಪ್ರದೀಪನ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಸಹಕಾರಿ ರಂಗದ ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂ ರೈತರ ಆರ್ಶೀವಾದದೊಂದಿಗೆ ನಾಡಿನಲ್ಲಿಯೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಾ ರೈತರ ಜೀವನಾಡಿಯಾಗಿದೆ .ಆಡಳಿತ ಮಂಡಳಿ ,ಕಾರ್ಮಿಕರು ಹಾಗೂ ರೈತರು ಪರಸ್ವರ ಸಹಕಾರದಿಂದ ಕಾರ್ಯನಿರ್ವಹಿಸಿ ಕಾರಖಾನೆಯ ಏಳ್ಳಿಗೆಗೆ ಶ್ರಮಿಸುವಂತೆ ಶ್ರೀಗಳು ಕರೆ ನೀಡಿದರು
ಕಾರಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ ರೈತ ಭಾಂಧವರು ಪ್ರಾರಂಭದಿಂದಲೂ ಈ ಕಾರಖಾನೆಗೆ ಕಬ್ಬನ್ನು ಪೂರೈಸಿ ಆರ್ಶಿಶದಿಸುತ್ತಾ ಬಂದಿದ್ಧಿರಿ.ಯಾವುದೇ ಊಹಾಪೋಹಗಳಿಗೆ ಕಿವಿಗೋಡದೆ ತಮ್ಮ ಕಾರಖಾನೆ ಎಂದು ತಿಳಿದು ತಮ್ಮ ಕಬ್ಬನ್ನು ಕಾರಖಾನೆಗೆ ಕಳಿಸುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಕಾರಖಾನೆಯ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ ನಿರ್ದೆಶಕರುಗಳಾದ ಕೃಷ್ಣಪ್ಪಾ ಬಂಡ್ರೋಳಿ,ಕೆಂಚನಗೌಡ ಪಾಟೀಲ,ಬಸಗೌಡ ಪಾಟೀಲ,ಲಕ್ಷ್ಮಣ ಗಣಪ್ಪಗೋಳ,ಮಲ್ಲಿಕಾರ್ಜುನ ಕಬ್ಬೂರ,ಗಿರೀಶ ಹಳ್ಳೂರ,ಶಿವಲಿಂಗಪ್ಪ ಪೂಜೇರಿ,ಸಿದ್ದಲಿಂಗಪ್ಪ ಕಂಬ್ಳಿ,ಬಾಳಪ್ಪ ಜಾಗನೂರ,ಬೂತಪ್ಪ ಗೋಡೆರ,ಮಹಾದೇಪ್ಪ ಭೋವಿ,ಯಲ್ಲವ ಸಾರಾಪೂರ ಕವೇರಿ ಅಧೀಕ್ಷಕ ಐ.ಎ.ಜಂಬಗಿ,ಕಬ್ಬು ಅಭಿವೃದ್ಧಿ ಅಧಿಕಾರಿ ಜೆ.ಆರ್.ಬಬಲೇಶ್ವರ ಹಾಗೂ ರೈತ ಮುಖಂಡರು ಮತ್ತು ಕಾರ್ಮಿಕ ಸಿಬ್ಬಂದಿಗಳು ಇದ್ದರು