ಗೋಕಾಕ:ನಿರಾಶ್ರಿತರಿಗೆ ಸೂರು ನಿರ್ಮಿಸಿಕೊಳ್ಳುವದಕ್ಕೆ ಸಹಾಯ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಕುತುಬುದ್ದೀನ ಬಸ್ಸಾಪೂರ

ನಿರಾಶ್ರಿತರಿಗೆ ಸೂರು ನಿರ್ಮಿಸಿಕೊಳ್ಳುವದಕ್ಕೆ ಸಹಾಯ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಕುತುಬುದ್ದೀನ ಬಸ್ಸಾಪೂರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ.10 –
ನಗರದ ನೆರೆ ಪೀಡಿತ ಪ್ರದೇಶದ ಜನರಿಗಾಗಿ ಬೆಳಗಾವಿಯ ವಿವಿಧ ಮುಸ್ಲಿಂ ಸಮಾಜಗಳ ಸಂಯುಕ್ತವಾಗಿ ಮದೀನಾ ಮಸಜದ ರಿಲೀಫ ಫೌಂಡೇಶನ್ ಆಶ್ರಯದಲ್ಲಿ ಅವಶ್ಯಕ ವಸ್ತುಗಳನ್ನು ಶನಿವಾರದಂದು ವಿತರಿಸಿದರು.
ನಗರದ ಮುಖ್ಯ ಜಾಮಿಯಾ ಮಸಜಿದ ಆವರಣದಲ್ಲಿ ನೆರೆ ಪೀಡಿತ ಜನರಿಗೆ ಬಟ್ಟೆ, ರಗ್, ಬ್ಲ್ಯಾಕೆಟ್, ಚಾಪೆ, ನೀರಿನ ಬಾಟಲಿ ಮತ್ತು ಹಾಲು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ ಅವರು ಮಾತನಾಡಿ ಈಗ ನಿರಾಶ್ರರಿಗೆ ಅವಶ್ಯಕ ವಸ್ತುಗಳನ್ನು ನೀಡುವದರ ಜೊತೆಗೆ ನೀರು ಕಡಿಮೆಯಾದ ನಂತರ ತಲೆಯ ಮೇಲೆ ಸೂರು ನಿರ್ಮಿಸಿಕೊಳ್ಳುವದಕ್ಕೆ ಸಹಾಯ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿಯಿಂದ ನಿರಾಶ್ರಿತರಿಗಾಗಿ ಸಮಗ್ರ ತಂದ ಮುಖಂಡರಾದ ಮೌಲಾನಾ ಸಾಜಿದಸಾಬ, ಝಾಕೀರಹಮ್ಮದ, ಮಹಮ್ಮದ ಹನೀಫ, ಗಜಬರಸಾಬ ಘೀವಾಲೆ, ಜಾಕೀರಹುಸೇನ ಕುಡಚಿಕರ, ಮುಸ್ತಾಕ ಖಂಡಾಯತ, ಹಾಜಿ ಅಬ್ದುಲ್ಗಫಾರ ಕಾಗಜಿ ಸೇರಿದಂತೆ ಅನೇಕರು ಇದ್ದರು.