ಗೋಕಾಕ:ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ
ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ
ಗೋಕಾಕ ಸೆ, 16 ;- ಇಲ್ಲಿಯ ನಗರಸಭೆ ವತಿಯಿಂದ ಯುವ ಧುರೀಣ ಬಸಸವರಾಜ ಸಾಯನ್ನವರ ಅವರು ಗಣೇಶ ವಿಸರ್ಜನೆ ನಿಮಿತ್ತ ನಗರದ ಮಾರ್ಕಂಡೇಯ ನದಿ (ಚಿಕ್ಕೋಳಿ ಫೂಲ್) ಯನ್ನು ಭಾನುವಾರದಂದು ಸ್ವಚ್ಛಗೊಳಿಸಿದರು.
ನದಿ ಭಾಗವು ಕಲುಷಿತಗೊಂಡಿದ್ದು, ಅದನ್ನು ಜೆಸಿಬಿಯಿಂದ ಸುಮಾರು 8 ಜನರ ತಂಡವು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಗಣೇಶ ವಿಸರ್ಜನೆಗೆ ಅನುಕೂಲ ಮಾಡಿದರು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರಸಭೆ ಸಿಬ್ಬಂದಿ ವರ್ಗ ಹಾಗೂ 18 ಮತ್ತು 19 ರ ಯುವಕರು ಮುಖಂಡ ಬಸವರಾಜ ಸಾಯನ್ನವರ ಅವರ ಜೊತೆ ಕೈಗೂಡಿಸಿದರು.