RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ

ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ 

ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ  ಕಾವೇರಿ ಒಬನ್ನಗೋಳ ಸಲಹೆ

 

ಗೋಕಾಕ : ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯವೆಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಕುಮಾರಿ ಕಾವೇರಿ ಒಬನ್ನಗೋಳ ಹೇಳಿದರು.

ಅವರು ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕವು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 51ನೇ ಹುಟ್ಟು ಹಬ್ಬದ ನಿಮಿತ್ಯ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮೂಡಲಗಿ ಮತ್ತು ಗೋಕಾಕ ವಲಯದ ವಿದ್ಯಾರ್ಥಿಗಳಿಗೆ ನಗರದ ಶೂನ್ಯ ಸಂಪಾದನ ಮಠದಲ್ಲಿ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದಳು.

ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳು ಜಾಣರು, ಕಡಿಮೆ ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳೆಲ್ಲ ದಡ್ಡರೆಂದು ಗ್ರಹಿಸುವುದು ತಪ್ಪು. ಬದುಕುವ ಶೈಲಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳುಲು ಸಾಧ್ಯ. ಆ ನಿಟ್ಟಿನಲ್ಲಿ ತಳಮಟ್ಟದಿಂದ ಸಂಘರ್ಷ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಮಹನೀಯರನ್ನು ವಿದ್ಯಾರ್ಥಿಗಳು ಆದರ್ಶವನ್ನಾಗಿಸಿಕೊಂಡು ತಮ್ಮ ಬದುಕನ್ನು ಸ್ವಾರ್ಥಕ ಗೋಳಿಸಿ ಕೊಳಬೇಕೆಂದು ಕುಮಾರಿ ಕಾವೇರಿ ಒಬನ್ನಗೋಳ ಹೇಳಿದಳು.

ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮ.ನಿ.ಪ್ರ.ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶೀವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಬಿ.ಬಳಗಾರ ವಹಿಸಿದ್ದರು. ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎ.ಸಿ.ಮನ್ನಿಕೇರಿ ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಎಂ.ಡಿ.ಬೇಗ, ಕರವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಉಪಾಧ್ಯಕ್ಷ ದೀಪಕ ಹಂಜಿ ಸೇರಿದಂತೆ ಅನೇಕರು ಇದ್ದರು.

ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆಗೈದ ಮೂಡಲಗಿ ಮತ್ತು ಗೋಕಾಕ ವಲಯದ ವಿದ್ಯಾರ್ಥಿಗಳಾದ ಮಲಗೌಡ ಪಾಟೀಲ, ಹರೀಶ ನಾಂದನಿ, ಚೈತ್ರಾ ಹುಲ್ಲಾರ, ಸನಾ ಲಬ್ಬಿ, ಸುನೀಲ ಕರಿಗಾರ, ಶೃತಿ ಮಧಬಾಂವಿ, ರವಿ ಕೊಂಗಾಲಿ, ಅಡಿವೆಪ್ಪ ಜಾಬಶೆಟ್ಟಿ, ಮಂಜುಳಾ ದಾನಪ್ಪಗೋಳ ಹಾಗೂ ಮೂಡಲಗಿ  ಮತ್ತು ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ.ಬಿ.ಬಳಗಾರ ,ಎ.ಸಿ.ಮನ್ನಿಕೇರಿ ಅವರನ್ನು  ಸತ್ಕರಿಸಲಾಯಿತು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರೆರೆಯುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಶಿಕ್ಷಕ ಮಿರ್ಜಿ ನಿರೂಪಿಸಿ ವಂದಿಸಿದರು

Related posts: