RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ

ಮೂಡಲಗಿ:ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ 

ಸಾಲ ವಸುಲಾತಿಗಾಗಿ ಬಂದ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ
ಮೂಡಲಗಿ ಅ 6 : ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗಬಂಧನ ವಿಧಿಸಿರುವ ಘಟನೆ ಸೋಮವಾರ ಮೂಡಲಗಿ ತಾಲೂಕಿ ಜೋಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಜೋಕಾನಟ್ಟಿ ಗ್ರಾಮದ ಸಿದ್ದವ್ವ ಅಜ್ಜಪ್ಪ ಭಾಗನ್ನವರ, ಲಕ್ಷ್ಮಣ ಬಾಲಪ್ಪ ದಂಡಿನ್ನವರ, ಶಂಕರ ಲಕ್ಷ್ಮಣ ಮಾದರ ಇವರು ತಮ್ಮ ಜೀಮಿನಗಳ ಮೇಲೆ ಕಳೆದ 6 ವರ್ಷಗಳ ಹಿಂದ ಪಡೆದ ಜಾಮಿನ ಸಾಲದ ಮೊತ್ತ 3 ಲಕ್ಷ ರೂ ಮತ್ತು ಬಡ್ಡಿ 2,60,200 ರೂಗಳ ವಸುಲಾತಿಗಾ ಜಮೀನು ಹರಾಜಿಗಾಗಿ 25-6-2018 ರಂದು ನೀಡಿದ ನೋಟಿಸಿಗೆ ಸಾಲಗಾರರು ಸುಮಾರು 80 ಸಾವಿರ ರೂಗಳನ್ನು 17-4-18 ರಂದರು ಬ್ಯಾಂಕಿಗೆ ತುಂಬಿದರು ಸಹ ರೈತರಿಗೆ ಕಾಲಾವಕಾಶ ಕೊಡದೆ ಆ.6 ರಂದು ಜೋಕಾನಟ್ಟಿ ಗ್ರಾಮಕ್ಕೆ ಜಮೀನು ಹರಾಜು ಮಾಡಲು ಮುಂದಾದಾಗ ಬೆಳಗಾವಿ ಜಿಲ್ಲಾ ರೈತ ಸಂಘದ ಪದಾಧಿಕಾರಿ ವಸುಲಾತಿಗಾಗಿ ಬಂದ ಅಧಿಕಾರಿಗಳಿಗೆ ದಿಗಬಂಧನ ವಿಧಿಸಿರುದರಿಂದ ಅಧಿಕಾರಿಗಳು ಸಾಲ ಮರು ಪಾವತಿಗಾಗಿ ಕಾಲಾಅವಕಾಶ ನೀಡುವದಾಗಿ ಭರವಸೆ ನೀಡಿದ ನಂತರ ದಿಗಬಂಧನದಿಂದ ಮುಕ್ತಗೋಳಿಸಿದ್ದರು.
ಈ ಸಂಧರ್ಭದಲ್ಲಿ ರೈತ ಸಂಘದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮುತ್ತಪ್ಪ ಭಾಗನ್ನವರ, ಹಣಮಂತ ಬಿಳ್ಳುರ, ಮಹಾದೇವ ಗೋಡೆರ, ಕುಮಾರ ತೇಲಿ, ವಿವೇಕ ಸನದಿ, ಮಹಾಂತೇಶ ರಡ್ಡೇರಟ್ಟಿ, ಬಸು ಪಡದಳ್ಳಿ, ಪಾಂಡುರಂಗ ಬಿರಗಡ್ಡಿ, ಭೀಮಶಿ ಹುಲಕ್ಕುಂದ, ಕಲ್ಲಪ್ಪ ಉಪ್ಪಾರ, ವಿಠ್ಠಲ ಪೂಜೇರಿ ಮತ್ತಿತರು ಉಪಸ್ಥಿತರಿದ್ದರು.

Related posts: