RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ

ಗೋಕಾಕ:ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ 

ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸ : ರೈತ ಸಂಘಟನೆಯಿಂದ ಪ್ರತಿಭಟನೆ
ಗೋಕಾಕ ಮೇ 26 : ಪೈನಾನ್ಸ ಸಿಬ್ಬಂದಿಯಿಂದ ರೈತನಿಗೆ ಮೋಸವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬ್ಯಾಂಕ ಸಿಬ್ಬಂದಿಗೆ ದಿಗ್ಗಬಂಧನ ಹಾಕಿ ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ

ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ರೈತ ಅವ್ವನಾ ಕಳಿಗುದ್ದಿ ಟಾಟಾ ಮೋಟಾರ್ಸ್ ಪೈನಾನ್ಸನಿಂದ ಟಾಟಾ ಎಸ್ ವಾಹನ ಖರೀದಿಸಲು ಸುಮಾರು 3.35 ಸಾಲ ಪಡೆದಿದ್ದ , ಬಾಕಿ ಉಳಿದ ಸುಮಾರು 1.44 ಸಾವಿರ ರೂ ಸಾಲದ ಕೊನೆಯ ಕಂತ್ತನ್ನು ಮರು ಪಾವತಿಸುವಾಗ 1 ಲಕ್ಷ ರೂ ಆರ್.ಟಿ.ಜಿ.ಎಸ್ ಮಾಡಿ ಉಳಿದ 44 ಸಾವಿರ ರೂ ಸಾಲ ವಸೂಲಿಗಾರನ ಕೈಯಲ್ಲಿ ನೀಡಿ ಸಂಪೂರ್ಣಸಾಲ ಪಾವತಿಸಿದ್ದ ಆದರೆ ಸಾಲ ವಸೂಲಿಗಾರ ರಾಮದುರ್ಗ ಪಟ್ಟಣದ ರಾಜು ಬಂಡಿವಡ್ಡರ ಎಂಬುವವನು ರೈತ ಕಳಿಗುದ್ದಿ ಪಾವತಿಸಿದ 44 ಸಾವಿರ ರೂ ಪೈನಾನ್ಸಿಗೆ ಪಾವತಿಸದೆ ಮೋಸ ಮಾಡಿದ್ದಾನೆಂದು ರೈತ ಸಂಘಟನೆಯ ಕಾರ್ಯಕರ್ತರು ಆರೋಪಿಸಿ , ಸಾಲ ಮರು ಪಾವತಿಗೆ ಬಂದ ಪೈನಾನ್ಸ ಸಿಬ್ಬಂದಿಯನ್ನು ದಿಗ್ಗಬಂಧನ ಹಾಕಿ ತಹಶೀಲ್ದಾರ್ ಕಛೇರಿಗೆ ಕರೆತಂದು ಮೋಸ ಹೋದ ರೈತನಿಗೆ ನ್ಯಾಯ ದೊರಕಿಸಿಬೇಕೆಂದು ಮನವಿ ಮಾಡಿದ್ದಾರೆ

ಈ ಸಂದರ್ಭದಲ್ಲಿ ರೈತ ಸಂಘದ ಭೀಮಶಿ ಗದಾಡಿ , ಗಣಪತಿ ಈಳಿಗೇರ , ಮುತ್ತೆಪ್ಪಾ ಬಾಗನ್ನವರ , ವೆಂಕಪ್ಪ ಕೋಪ್ಪದ , ಸಿದ್ಧಪ್ಪ ತಪಸಿ , ಜಯಪ್ಪ.ನಾಯಿಕ , ಕುಮಾರ ತಿಗಡಿ , ಮಂಜುನಾಥ್ ಝಲ್ಲಿ , ಬಾಲಪ್ಪ ಗೌಡರ , ಮಾರುತಿ ಜೊತೆನ್ನವರ ಸೇರಿದಂತೆ ಅನೇಕರು ಇದ್ದರು

Related posts: